ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಎಸ್. ಪ್ರಸ್ತಾವಿಸಿ, ಸಂವಿಧಾನದ ಮಹತ್ವ ವಿವರಿಸಿ ಅಂಬೇಡ್ಕರ್ ಜೀವನದ ಮಾಹಿತಿ, ಸಮಾನತೆಯ ಆಧಾರದಲ್ಲಿ ಸಮಾಜ ಕಟ್ಟುವ ಉದ್ದೇಶದಿಂದ ಸಂವಿಧಾನದಲ್ಲಿ ಹಲವಾರು ಅವಕಾಶಗಳನ್ನು ಸೃಷ್ಟಿಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಪುಷ್ಟಿ ನೀಡಿದರ ಬಗೆಯನ್ನು ವಿವರಿಸಿ ಸಂವಿಧಾನದ ಶಿಲ್ಪಿಗಳ ಉದ್ದೇಶವನ್ನು ಈಡೇರಿಸುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲಲೆ ಸೌಮ್ಯ ಹೆಚ್.ಕೆ. ಇವರು ಸಂವಿಧಾನದ ಮಹತ್ವವನ್ನು ವಿವರಿಸಿ, ಉತ್ತಮ ಆಶಯಗಳನ್ನೊಳಗೊಂಡ ದೀರ್ಘವಾದ ಸಂವಿಧಾನವಾಗಿದ್ದು, ಅದರಲ್ಲಿ ಭಾರತದ ಸಮಸ್ಯೆಗಳಿಗೆ ಪರಿಹಾರವೂ ಅಡಗಿದೆ. ನಮಗೆ ಬೇಕೆನಿಸಿದಂತೆ ಸಂವಿಧಾನವನ್ನು ತಿರುಚದೆ ಸಂವಿಧಾನ ಶಿಲ್ಪಿಗಳ ಮೂಲ ಉದ್ದೇಶವನ್ನು ಈಡೇರುವಂತೆ ಅವರ ಚಿಂತನೆಗಳಿಗೆ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಿ ಸಂವಿಧಾನವನ್ನು ಉಳಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿಗಳಾದ ಗಾಯತ್ರಿ ಮತ್ತು ಇಂದ್ರಾವತಿ ಪ್ರಾರ್ಥಿಸಿದರು. ಪೂಜಾ ಸ್ವಾಗತಿಸಿ,ಅಶ್ವಿತ ವಂದಿಸಿದರು. ಶಮೀಮ ಕಾರ್ಯಕ್ರಮ ನಿರೂಪಿಸಿದರು.














