ಬಂಟ್ವಾಳ: ದ.ಕ. ಜಿಲ್ಲೆಯ ಮಂಗಳೂರಿನ ಕುಲಶೇಖರ ನಿವಾಸಿಗಳಿಬ್ಬರಿಗೆ ಇಂದು ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.
ಮಂಗಳೂರಿನ ಕುಲಶೇಖರದ ತಾಯಿ ಹಾಗೂ ಮಗನಿಗೆ ಕೊರೋನಾ ದೃಢಪಟ್ಟಿದೆ.
ತಾಯಿ ಪಡೀಲ್ ನ ಫಸ್ಟ್ ನ್ಯೂರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಮಗನೂ ಆಸ್ಪತ್ರೆಗೆ ಭೇಟಿ ನೀಡುತಿದ್ದರು ಎನ್ನಲಾಗಿದೆ.

ಇವರಿಗೆ P 432 ರಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿದ್ದು, ರಾಜ್ಯದಲ್ಲಿ 511ಕ್ಕೆ ಏರಿದೆ.

