ವಿಟ್ಲ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಮುಡ್ನೂರು ಗ್ರಾಮದ ಮಾಡತಡ್ಕ ದರ್ಬೆಯಲ್ಲಿ ನಡೆದಿದೆ.
ದರ್ಬೆ ನಿವಾಸಿ ಹರೀಶ್ ಆಚಾರ್ಯ ಮೃತಪಟ್ಟ ವ್ಯಕ್ತಿ.
ಹರೀಶ್ ಆಚಾರ್ಯ ಫೆ.9 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ರಾತ್ರಿಯಾದರು ಮನೆಗೆ ಬರದೇ ಇದ್ದಾಗ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಮನೆಗೆ ಬರುವ ವೇಳೆ ಬ್ಯಾರಿ ಹಿತ್ಲು ಬಳಿಯ ನೀರಿನ ಕಿಂಡಿ ಅಣೆಕಟ್ಟೆಯಲ್ಲಿ ಕಾಲು ಜಾರಿ ಬಿದ್ದಿರುವುದಾಗಿ ಶಂಕಿಸಲಾಗಿದೆ.
ಮೃತರ ಪತ್ನಿ ಯಶೋಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
