ಬಂಟ್ವಾಳ : ಕಾರು ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ರಿಕ್ಷಾದಲ್ಲಿದ್ದ ಅಕ್ಕತಂಗಿ ಮಹಿಳೆಯರಿಬ್ಬರು ಅಸುನೀಗಿದ ಘಟನೆ ಇಂದು ಸಂಜೆ ಸಜೀಪದಲ್ಲಿ ನಡೆದಿದೆ.

ಮಂಚಿ ನಿವಾಸಿ ಗಳಾದ ಜೈನಾಬಾ(45) ಹಾಗೂ ಜೋಹರಾ (55) ಮ್ರತಪಟ್ಟಿದ್ದಾರೆ.
ಮಂಚಿ ನಿವಾಸಿಗಳಾದ ಅಕ್ಕ ತಂಗಿ ಯರು ಆಸ್ಪತ್ರೆ ಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿತು ಎಂದು ತಿಳಿಸಿದ್ದಾರೆ.
ಜೋಹರಾ ಅಸೌಖ್ಯದ ಹಿನ್ನೆಲೆಯಲ್ಲಿ ಜೈನಾಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆ ಗೊತ್ತುಮಾಡಿ ಚೇಲೂರಿಗೆ ವೈದ್ಯರ ಬಳಿ ತೆರಳುತ್ತಿದ್ದರು.
ಸಜೀಪ ಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರೊಂದು ಅತೀ ವೇಗವಾಗಿ ಇನ್ನೊಂದು ವಾಹನವನ್ನು ಒವರ್ ಟೇಕ್ ಮಾಡುವ ಭರದಿಂದ ಕಂಟ್ರೋಲ್ ತಪ್ಪಿ ಸಜೀಪ ಕಡೆಯಿಂದ ಬರುತ್ತಿದ್ದ ರಿಕ್ಷಾ ಕ್ಕೆ ಡಿಕ್ಕಿ ಹೊಡೆದಾಗ ರಿಕ್ಷಾ ಪಲ್ಟಿಯಾಗಿದೆ . ಪಲ್ಟಿಯಾದ ರಿಕ್ಷಾದಲ್ಲಿದ್ದ ಅಕ್ಕ ತಂಗಿಯರು ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರು ಆಸ್ಪತ್ರೆ ಗೆ ಕೊಂಡುಹೋಗುವ ದಾರಿ ಮಧ್ಯೆ ಇವರು ಅಸುನೀಗಿದರು ಎಂದು ತಿಳಿಸಿದ್ದಾರೆ.
ರಿಕ್ಷಾ ಚಾಲಕ ಆಶ್ರಫ್ ಹಾಗೂ ಕಾರು ಚಾಲಕ ಮಹಮ್ಮದ್ ಸಿರಾಜ್ ಕೂಡಾ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುನಾಥ್ ಬೇಟಿ ನೀಡಿದ್ದಾರೆ.