ಬೆಳ್ತಂಗಡಿ: ತಾಲೂಕಿನ ಮಡಂತ್ಯಾರ್ ಗ್ರಾ.ಪಂ. ಸದಸ್ಯ, ಪಾರೆಂಕಿ ನಿವಾಸಿ, ಸುಂದರ ಆಚಾರ್ಯ ಅವರ ಪುತ್ರ ರಂಜಿತ್ ಆಚಾರ್ಯ(24) ಅವರು ಹೃದಯಾಘಾತದಿಂದ ಇಂದು ಏ. 18 ರಂದು ನಿಧನರಾದರು.
ಇವರು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ನಿಂದಾಗಿ ಊರಿಗೆ ಬಂದಿದ್ದರು.
ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


