ಬಂಟ್ವಾಳ: ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ.ಸಿ.ರೋಡು ಮಯ್ಯರಬೈಲು ನಿವಾಸಿ ಬಿ.ನಾರಾಯಣ ಸೋಮಯಾಜಿ (64) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, ಸಹೋದರ, ಸಹೋದರಿ ಸಹಿತ ಬಂಧು ಮಿತ್ರರನ್ನು ಹೊಂದಿದ್ದರು. ಕಳೆದ 24 ವರ್ಷಗಳಿಂದ ಅವರು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.


