ಬಂಟ್ವಾಳ, ಮೇ ೨೫: ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬರೀಮಾರು ಎಂಬಲ್ಲಿ ಶನಿವಾರ ಸಂಭವಿಸಿದೆ.


ಮೃತರನ್ನು ಮನೀಷ್ (೧೪) ಮತ್ತು ಅಜೀತ (೪೦) ಎಂದು ಗುರುತಿಸಲಾಗಿದ್ದು, ರಕ್ಷಿತ್ (೧೩) ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಬರೀಮಾರು ಗ್ರಾಮದ ಕಾಗೆಕಾನ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ನೀರಾಟವಾಡುತ್ತಿದ್ದಾಗ ಈ ಅವಘಡ ಸಂಭವಿದೆ ಎನ್ನಲಾಗಿದೆ.
ಬರಿಮಾರು ಸಂಬಂಧಿಕರ ಮನೆಗೆ ಆಗಮಿಸಿದ ಇವರು ನೇತ್ರಾವತಿ ನದಿಗೆ ಸ್ನಾನ ಕ್ಕೆಂದು ತೆರಳಿದ್ದರು.ನದಿಯ ನೀರಿನ ಆಳ ತಿಳಿಯದ ಇವರು ನೀರಿನಲ್ಲಿ ಮುಳುಗಿರಬೇಕು ಎಂದು ಸ್ಥಳೀಯ ರು ತಿಳಿಸಿದ್ದಾರೆ.
ನಾಳೆ ಸೋಮೇಶ್ವರ ದಲ್ಲಿ ನಡೆಯುವ ಮದುವೆ ಕಾರ್ಯಕ್ರಮ ಕ್ಕೆ ಮುಂಚಿತವಾಗಿ ಇವರು ಬಂದಿದ್ದರು.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಪೊಲೀಸರು ಇನ್ನಷ್ಟೇ ತಿಳಿಸಬೇಕಿದೆ.