ಬಂಟ್ವಾಳ,: ಪೈಟಿಂಗ್ ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕರಿಬ್ಬರು ಆಯ ತಪ್ಪಿ ಬಿದ್ದು, ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ಬಂಟ್ವಾಳ ಭಂಡಾರಿಬೆಟ್ಟಿನಲ್ಲಿ ನಡೆದಿದೆ.
ಕಾಮಾಜೆ ನಿವಾಸಿ ನಾರಾಯಣ ಅವರ ಪುತ್ರ ಸುರೇಶ್(೨೬) ಮೃತ ದುಧೈವಿ. ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಂಡಾರಿಬೆಟ್ಟಿನ ಫ್ಲ್ಯಾಟೊಂದರ ಪೈಟಿಂಗ್ ಕಾಮಗಾರಿ ನಿರ್ವಹಿಸುತ್ತಿದ್ದು, ಪೈಂಟ್ ಮಾಡಲು ನಿಲ್ಲುವುದಕ್ಕೆ ಅಳವಡಿಸಿದ್ದ ಕಂಬಗಳನ್ನು ತೆರವುಗೊಳಿಸುವ ವೇಳೆ ಇಬ್ಬರು ಕಾರ್ಮಿಕ ಆಯತಪ್ಪಿ ಬಿದ್ದಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡು ಕಾರ್ಮಿಕರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ತಲೆ ಗಂಭೀರ ಗಾಯವಾಗಿದ್ದ ಸುರೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
