ಬಂಟ್ವಾಳ: ರಾಜ್ಯದಲ್ಲಿ ಕೊರೋನಾ ಗೆ ಮತ್ತೊಂದು ಬಲಿ. ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತನ ಸಾವು. ದ.ಕ. ಜಿಲ್ಲೆಯಲ್ಲಿ 6ನೇ ಸಾವು. ಕ್ವಾರಂಟೈನ್ ಸೆಂಟರ್ ನಲ್ಲಿ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಯಲ್ಲಿ ಇದೀಗ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮೃತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಇದರ ವರದಿ ಇಂದು ಲಭ್ಯವಾಗಿದ್ದು, ಮೃತರ ಪರೀಕ್ಷಾ ವರದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

ಮೂಡಬಿದ್ರೆಯ ಕಡಂದಲೆ ನಿವಾಸಿ ಮೃತ ಪಟ್ಟಿದ್ದಾರೆ. ಇವರು ಮುಂಬೈ ನಿಂದ ಬಂದು ಕ್ವಾರಂಟೈನ್ ನಲ್ಲಿದ್ದು, ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವ್ಯಕ್ತಿ ಜಿಲ್ಲಾಡಳಿತ ನಿಗದಿ ಪಡಿಸಿದ ಚೆಕ್ ಪೋಸ್ಟ್ ಮೂಲಕ ಬಾರದೆ, ಸಚ್ಚೇರಿಪೇಟೆ ಒಳ ರಸ್ತೆಯ ಮೂಲಕ ಮೂಡುಬಿದಿರೆ ಕಡಂದಲೆ ಗ್ರಾಮಕ್ಕೆ ಬಂದಿದ್ದರು. ಬಳಿಕ ಅವರನ್ನು ದ.ಕ. ಹಿರಿಯ ಪ್ರಾ. ಶಾಲೆ ಕಡಂದಲೆ ಮೈನ್ ನಲ್ಲಿ ಕ್ವಾರಂಟೈನ್ ಗೊಳಪಡಿಸಲಾಗಿತ್ತು. ಆದರೆ, ಕೊರೊನಾ ಭೀತಿ ಹಾಗೂ ವೈಯುಕ್ತಿಕ ಕಾರಣದಿಂದ ಅವರು ಗುರುವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಟಲ ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗಿದ್ದು, ಇದೀಗ ವರದಿ ಲಭ್ಯವಾಗಿದ್ದು, ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ 42ಕ್ಕೆ ಏರಿದ ಸಾವಿನ ಸಂಖ್ಯೆ.

