ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೋವಿಡ್ -19 ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ರೂ. ಅನ್ನು ನೀಡಲಾಯಿತು.

ಕರ್ನಾಟಕದಲ್ಲಿ ಕೋವಿಡ್ -19 ಅಟ್ಟಹಾಸ ಹೆಚ್ಚಾಗಿದ್ದು, ಆರ್ಥಿಕವಾಗಿ ಸರ್ಕಾರ ಬಲಗೊಳ್ಳುವ ಉದ್ದೇಶದಿಂದ ಕೋವಿಡ್- 19 ಮುಖ್ಯಮಂತ್ರಿ ಪರಿಹಾರ ನಿಧಿ ಆರಂಭವಾಗಿದ್ದು, ಇದಕ್ಕೆ 25 ಸಾವಿರ ರೂ. ಅನ್ನು ಈ ಸಂಘ ನೀಡಿದೆ.
ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ನಿರ್ದೇಶಕರಾದ ಶಶಿಧರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ 25 ಸಾವಿರ ರೂಪಾಯಿಯನ್ನು ಶಾಸಕ ಹರೀಶ್ ಪೂಂಜಾ ರಿಗೆ ಹಸ್ತಾಂತರಿಸಿದರು.

