Saturday, January 31, 2026

ರಾಜ್ಯದಲ್ಲಿ ಎರಡು ದಶಕಗಳ ಸನಿಹಕ್ಕೆ ತಲುಪಿದ ಕೊರೋನಾ ಪಾಸಿಟಿವ್ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೊರೋನ ಸೋಂಕಿತರ ಮತ್ತು ಸಾವಿನ ಸಂಖ್ಯೆ ಏರುತ್ತಲೇ ಸಾಗಿದ್ದು ರವಿವಾರ ಒಂದೇ ದಿನ ಒಟ್ಟು ಸೋಕಿನ ಸಂಖ್ಯೆ ಎರಡು ದಶಕಗಳ ಸಮೀಪಕ್ಕೆ ತಲುಪಿದೆ.

ರವಿವಾರ ಸೋಂಕಿನಿಂದ 81 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯ ಅವಧಿಯಲ್ಲಿ 19,067 ಮಂದಿಗೆ ಸೋಂಕು ದೃಢಪಟ್ಟಿದೆ.

ದಿನ ಕಳೆದಂತೆ ಬೆಂಗಳೂರು ನಗರ ಸಾವಿನ ನಗರವಾಗುತ್ತಿದ್ದು ರವಿವಾರ ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು 11,61,065 ಪ್ರಕರಣ ದೃಢಪಟ್ಟಿದ್ದು ಒಟ್ಟು 13,351ಮಂದಿ ಮೃತಪಟ್ಟಿದ್ದಾರೆ. 1,33,543 ಸಕ್ರಿಯ ಪ್ರಕರಣಗಳಿದೆ.

ಇಂದಿನ ಸೋಂಕಿತರ ವಿವರ: ಬಾಗಲಕೋಟೆ-104, ಬಳ್ಳಾರಿ-238, ಬೆಳಗಾವಿ-129, ಬೆಂಗಳೂರು ಗ್ರಾಮಾಂತರ-245, ಬೆಂಗಳೂರು ನಗರ-12,793 ಬೀದರ್-469, ಚಾಮರಾಜನಗರ-102, ಚಿಕ್ಕಬಳ್ಳಾಪುರ-190, ಚಿಕ್ಕಮಗಳೂರು-81, ಚಿತ್ರದುರ್ಗ-102, ದಕ್ಷಿಣ ಕನ್ನಡ-272, ದಾವಣಗೆರೆ-133, ಧಾರವಾಡ-265, ಗದಗ-48, ಹಾಸನ-348, ಹಾವೇರಿ-43, ಕಲಬುರಗಿ-671, ಕೊಡಗು-44, ಕೋಲಾರ-175, ಕೊಪ್ಪಳ-65, ಮಂಡ್ಯ-338, ಮೈಸೂರು-777, ರಾಯಚೂರು-133, ರಾಮನಗರ-122, ಶಿವಮೊಗ್ಗ-156, ತುಮಕೂರು-494, ಉಡುಪಿ-152, ಉತ್ತರ ಕನ್ನಡ-104, ವಿಜಯಪುರ-200, ಯಾದಗಿರಿ-74 ಸೋಂಕಿತ ಪ್ರಕರಣ ಪತ್ತೆಯಾಗಿದೆ.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...