ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಲ್ಲಡ್ಕ ವಲಯ, ಮಣಿಕಂಠ ಸ್ವಸಹಾಯ ಸಂಘ ಕುದ್ರೆಬೆಟ್ಟು, ಸುರಕ್ಷಾ ಸ್ವಸಹಾಯ ಸಂಘ ಪೂರ್ಲಿಪಾಡಿ ಇವರ ಜಂಟಿ ಆಶ್ರಯದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಅರ್ಪಣೆ ಕಾರ್ಯಕ್ರಮ ಪೂರ್ಲಿಪಾಡಿ ಎಂಬಲ್ಲಿ ನಡೆಯಿತು.











ಕೋವಿಡ್ 19 ನ ಸಂಕಷ್ಟದ ಅವಧಿಯಲ್ಲಿ ಕೆಲಸ ಮಾಡಿದ ಆರೋಗ್ಯ ಕೇಂದ್ರ ದ ಸಿಬ್ಬಂದಿ ಗಳು, ಆಶಾಕಾರ್ಯಕರ್ತೆಯರು, ಪೋಲೀಸ್ ಹಾಗೂ ಮಾಧ್ಯಮದವರಿಗೆ ಗೌರವ ಅರ್ಪಣೆ ಕಾರ್ಯಕ್ರಮ ಬಾಳ್ತಿಲ ಗ್ರಾ.ಪಂ.ಸದಸ್ಯ ವೆಂಕಟರಾಯ ಪ್ರಭು ಅವರ ನೇತ್ರತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳ್ತಿಲ ಗ್ರಾ.ಪಂ.ಆಧ್ಯಕ್ಷ ವಿಠಲ ನಾಯ್ಕ ವಹಿಸಿ, ಬಳಿಕ ಮಾತನಾಡಿದ ಅವರು ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ನಮಗಾಗಿ ಕೆಲಸ ಮಾಡಿದ ಕೊರೊನಾ ವಾರಿಯರ್ಸ್ ಗಳಿಗೆ ಪಂಚಾಯತ್ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಗ್ರಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್.ಕೊಟ್ಯಾನ್, ಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ.ಅಣ್ಣಿ.ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯ ಮೇಲ್ವಿಚಾರಕಿ ಪ್ರೇಮಾ, ಬಾಳ್ತಿಲ ಎ.ಒಕ್ಕೂಟದ ಅಧ್ಯಕ್ಷೆ ಸಂದ್ಯಾ ನಾಯ್ಕ, ಮತ್ತಿತರು ಉಪಸ್ಥಿತರಿದ್ದರು.
ರಾಜೇಶ್ ಬಿ.ಆರ್.ಸ್ವಾಗತಿಸಿ, ಬೋಜರಾಜ್ ಕುದ್ರೆಬೆಟ್ಟು ವಂದಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

