ದೆಹಲಿ: ಮಾರಕ ಕೊರೋನಾ ವೈರಸ್ ಗೆ ಇಡೀ ಜಗತ್ತೇ ಆತಂಕಕ್ಕೀಡಾಗಿದೆ. ಇಂತಹ ವದಂತಿಗಳಿಗೆ ಕಿವಿಗೊಡದಂತೆ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿದ್ದಾರೆ. ಜನೌಷಧಿ ಸಂವಾದದಲ್ಲಿ ಮಾತನಾಡಿದ ಅವರು, ಅದು ತಿನ್ನಬೇಡಿ, ಇದು ತಿನ್ನಬೇಡಿ ಎಂದು ಜನರು ಸಂದೇಶ ನೀಡುತ್ತಾರೆ. ಇಂತಹವಕ್ಕೆಲ್ಲ ಕಿವಿಗೊಡಬೇಡಿ ಕೊರೋನಾ ವೈರಸ್ ಬಗ್ಗೆ ಆತಂಕ ಬೇಡ. ಮುಂಜಾಗ್ರತೆ ವಹಿಸಿ ಎಂದು ಹೇಳಿದರು.
ವೈರಸ್ ಬಗ್ಗೆ ನಿಮಗೆ ಏನಾದರೂ ಸಂದೇಹ, ಸಂಶಯಗಳು ಬಂದರೇ ಆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಬಳಿಕ ನಿಮ್ಮ ಮುಂದಿನ ನಿಲುವನ್ನು ತೆಗೆದುಕೊಳ್ಳಿ. ಕೊರೋನಾ ವೈರಸ್ ಹರಡುತ್ತಿರುವುದರಿಂದ ಸ್ವಚ್ಛತೆಯಿಂದ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿ. ಮಾಸ್ಕ್ ಗಳು ಹಾಗೂ ಕೈಚೀಲಗಳನ್ನು ಧರಿಸಿ. ಕೈಕುಲುಕುವುದನ್ನು ನಿಯಂತ್ರಿಸಿ. ಭಾರತದ ಸಂಪ್ರದಾಯದಂತೆ ನಮಸ್ಕರಿಸಿ ಶುಭಾಶಯ ತಿಳಿಸಿ ಎಂದು ತಿಳಿಸಿದ್ದಾರೆ. ಇದೀಗ ಇಡೀ ವಿಶ್ವವೇ ಶುಭಾಶಯ ತಿಳಿಸಲು ಭಾರತದ ಸಂಪ್ರದಾಯದಂತೆ ನಮಸ್ತೆಯನ್ನು ಬಳಕೆ ಮಾಡುತ್ತಿದೆ. ನಾವು ಕೂಡ ಅದನ್ನೇ ಅನುಸರಿಸೋಣ ಎಂದರು.


