ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಜೀಪ ನಡು ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾಂಭ ಭಜನಾಮಂದಿರ ಶಾರದ ನಗರ ಇವರ ಸಹಭಾಗಿತ್ವದಲ್ಲಿ ಶಾರದಾ ನಗರ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕೊರೊನಾ ಲಸಿಕೋತ್ಸವ ಕಾರ್ಯಕ್ರಮ ನಡೆಯಿತು.



45 ವರ್ಷ ಮೇಲ್ಪಟ್ಟ ವಯಸ್ಸಿನ ಸುಮಾರು 80 ಮಂದಿಗೆ ಇಂದು ಕೊವಿಡ್ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಸುಂದರ ಪೂಜಾರಿ, ದಯಾಲಕ್ಷ್ಮೀ, ಸರೋಜಿನಿ, ಸ್ಥಳೀಯ ಪ್ರಮುಖ ರಾದ ವಿಶ್ವನಾಥ ಕೊಟ್ಟಾರಿ, ಸೋಮಶೇಖರ್, ವಿಶ್ವನಾಥ ಬೆಳ್ಚಾಡ, ನಜೀಪ ನಡು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತುಪೈಲ್, ಹಿರಿಯ ಆರೋಗ್ಯ ಸಹಾಯಕಿ ಇಂದಿರಾ ಕಿರಿಯ ಆರೋಗ್ಯ ಸಹಾಯಕಿಯರಾದ
ಸುಮನ ಕ್ರಾಸ್ತ,ರೋಹಿಣಿ ಆಶಾಕಾರ್ಯಕರ್ತೆಯೆರಾದ ಮಿನಾಕ್ಷೀ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

