Thursday, July 10, 2025

ಕೊರೋನಾ ಬಂದ್: ಹೊರ ಜಿಲ್ಲೆಯಿಂದ ಅಗಮಿಸಿದ ಕಾರ್ಮಿಕರು ವಾಪಾಸು ಊರಿಗೆ ನಡೆದುಕೊಂಡು ತೆರಳಿದರು

ಬಂಟ್ವಾಳ: ಭಾರತ್ ಬಂದ್ ಅಗಿದ್ದು, ಕೆಲಸದ ನಿಮಿತ್ತ ಪರ ಊರಿಗೆ ಹೋದವರು ಅಲ್ಲೇ ಬಾಕಿಯಾಗಿದ್ದಾರೆ. ಬೇರೆ ಊರಿನಿಂದ ಕೆಲಸ ಅರಸಿಕೊಂಡು ಬಂದ ಬೇರೆ ಬೇರೆ ಜಿಲ್ಲೆಯವರು ದ.ಕ.ಜಿಲ್ಲೆಯಲ್ಲಿ ಬಾಕಿಯಾಗಿದ್ದಾರೆ.

ಅವರಿಗೆ ಮಾಡಲು ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ,
ರೇಷನ್ ಮುಗಿದಿದೆ, ಕೂರಲು ಸ್ಥಳವಿಲ್ಲ ಹಾಗಾಗಿ ತಮ್ಮ ತಮ್ಮ ಊರಿಗೆ ಹೊರಟಿದ್ದಾರೆ.
ಬಸ್ ಇಲ್ಲದ ಕಾರಣ ಹೋಗುವುದು ಹೇಗೆ ಎಂಬ ಚಿಂತನೆಯಲ್ಲಿ ರುವ ಕುಟುಂಬವೊಂದು ನಡೆದುಕೊಂಡು ಹೋಗಲು ಮುಂದಾಗಿದ್ದಾರೆ.
ಕೊಪ್ಪಳ ಮೂಲದ 12 ಮಂದಿ ಕೆಲಸದಾಳುಗಳು ವಾಪಾಸು ಅವರ ಊರಿಗೆ ನಡೆದುಕೊಂಡು ಹೋಗಲು ರೆಡಿಯಾಗಿ ಈಗಾಗಲೇ ಬಿಸಿರೋಡು ಬಿಟ್ಟು ಫರಂಗಿಪೇಟೆ ಮುಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ಕೆಲಸವನ್ನು ಅರಸಿಕೊಂಡು ಬಿಸಿರೋಡಿಗೆ ಈ ಕುಟುಂಬಗಳು ಬಂದಿತ್ತು.
ಇಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನಸಾಗಿಸುವುದು ಮತ್ತೆ ವಾಪಾಸು ಊರಿಗೆ ಮರಳುವುದು ಮಾಡಿಕೊಂಡು ಇದ್ದರು.
ಕೊರೊನೊ ಭೀತಿಯಿಂದ ಜನತಾಕರ್ಪ್ಯೂ ಅದೇಶ ಮಾಡಿದ ಕೂಡಲೇ ಈ ಎಲ್ಲಾ ಕುಟುಂಬ ಗಳಿಗೆ ಕೆಲಸವಿಲ್ಲದೆ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅವರು ವಾಪಾಸು ಊರಿಗೆ ಪಾದಸೇವೆಯ ಮೂಲಕ ಹೊರಟಿದ್ದಾರೆ.

ಊಟ ನೀಡಿ ಸಂತೈಸಿ ಕಳುಹಿಸಿದ ಗ್ರಾಮಾಂತರ ಎಸ್.ಐ.ಪ್ರಸನ್ನ

ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ರೌಂಡ್ಸ್ ನಲ್ಲಿರುವ ವೇಳೆ ಈ ಕುಟುಂಬ ನಡೆದುಕೊಂಡು ಹೋಗುವುದು ಗಮನಕ್ಕೆ ಬಂದಿತು. ಅವರನ್ನು ತಡೆದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂತು. ಹಸಿವಿನಲ್ಲಿರುವ ಬಗ್ಗೆ ಅವರು ಎಸ್.ಐ. ಅವರಲ್ಲಿ ಹೇಳಿಕೊಂಡಾಗ ಬ್ರಹ್ಮರಕೋಟ್ಲು ಟೋಲ್ ಗೇಟ್ ಬಳಿ ನಿಲ್ಲಿಸಿ ಅವರಿಗೆ ಬಿಸ್ಕತ್ತು ಗಳನ್ನು ತರಿಸಿಕೊಟ್ಟು ಉಪಚಾರ ಮಾಡಿ ಬಳಿಕ ಪರಂಗಿಪೇಟೆ ತಲುಪುವ ವೇಳೆ ಊಟ ತರಿಸಿಕೊಟ್ಟು ಹೊಟ್ಟೆ ತುಂಬಿಸಿ ಕಳುಹಿಸಿದರು.

ಹಸಿವಿನಿಂದ ನರಳಾಡುತ್ತಿದ್ದ ಕುಟುಂಬ ಕ್ಕೆ ಅನ್ನ ನೀಡಿ ಸಂತೈಸಿ ಊರಿಗೆ ಕಳುಹಿಸಿಕೊಟ್ಟ ಎಸ್.ಐ.ಪ್ರಸನ್ನ ಅವರು ಬಳಿಕ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ.ಆದರೆ ಕೊರೊನೊ ಭೀತಿಯಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ವಸತಿ ಕಲ್ಪಿಸುವ ವ್ಯವಸ್ಥೆ ಸಾಧ್ಯ ವಿಲ್ಲ ಅಂದ ಮೇಲೆ ಅವರನ್ನು ಮುಂದೆ ಹೋಗಲು ಅವಕಾಶ ನೀಡಿದರು.

ಹೋಟೆಲ್ ಎಲ್ಲಾ ಬಂದ್ ಅಗಿರುವುದರಿಂದ
ಊಟ ಸಿಗದ ಕಾರ್ಮಿಕರಿಗೆ ಎಸ್.ಐ.ಪ್ರಸನ್ನ ಅವರ ಸೂಚನೆಯಂತೆ ಪರಂಗಿಪೇಟೆ ಸಿಬ್ಬಂದಿಗಳಿಗೆ ತರಿಸಿದ ಊಟವನ್ನು ನೀಡಿದರು.
ಎ.ಎಸ್.ರಮೇಶ್, ಸಿಬ್ಬಂದಿಗಳಾದ ನಜೀರ್ ಸೋಮಶೇಖರ್ ಅವರು ಊಟವನ್ನು ಕಾರ್ಮಿಕರಿಗೆ ನೀಡುತ್ತಿರುವ ಚಿತ್ರ ಇಲ್ಲಿದೆ.

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಮುಖ್ಯೋಪಾಧ್ಯಾಯ ಗೋಪಾಲ್ ಅವರಿಗೆ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...