ಬಂಟ್ವಾಳ: ವಲಸೆ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸಿ, ಆಹಾರ ಕಿಟ್ ಗಳನ್ನು ವಿತರಿಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ವಿಟ್ಲ ಪೊಲೀಸ್ ತಂಡ.


ಕೊರೊನಾ ಲಾಕ್ ಡೌನ್ ನ ಸಮಸ್ಯೆಯಿಂದ ಹೊರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಿಗೆ ಜಿಲ್ಲೆಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ವಲಸೆ ಕಾರ್ಮಿಕರು ಇರುವ ಬರಿಮಾರು, ಪಲ್ಲಿಪ್ಪಾಡಿ, ಕರಿಯಂಗಳ, ಕುಡ್ತಮುಗೇರು, ಸಾಲೆತ್ತೂರು, ಬಂಟ್ವಾಳ ಕಡೆಗಳಿಗೆಲ್ಲ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದ ಪೊಲೀಸರ ತಂಡ ಬುಧವಾರ ಪರಿಶೀಲನೆ ನಡೆಸಿತು.
ಈಗಾಗಲೇ ಸಾಲೆತ್ತೂರಿನಲ್ಲಿ ಸ್ಥಳೀಯ ಪಂಚಾಯಿತಿ ಮೂಲಕ ವಲಸೆ ಕೂಲಿ ಕಾರ್ಮಿಕರಿಗೆ ಅವಶ್ಯಕ ಸಾಮಗ್ರಿಗಳನ್ನು ಒದಗಿಸಲಾಗಿದ್ದು, ಹೆಚ್ಚಿನ ನೆರವಾಗಿ ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ ಅವರೂ ಬಂಟ್ವಾಳ ವೃತ್ತ ನೀರಿಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಿದರು. ಪೋಲಿಸ್ ಸಿಬ್ಬಂದಿಗಳಾದ ಲೋಕೆಶ್, ಸತೀಶ್, ಯೋಗೇಶ್ ಹಾಗೂ ಕೊಳ್ನಾಡು ಬೀಟ್ ಸಿಬ್ಬಂದಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.












