ಬಂಟ್ವಾಳ: ಪುಂಜಾಲಕಟ್ಟೆ ಪೋಲೀಸ್ ಉಪನಿರೀಕ್ಷಕ ನಂದಕುಮಾರ್ ಅವರು ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿಯಾಗಿ ಪೋಲೀಸ್ ಇಲಾಖೆ ಅದೇಶ ಹೊರಡಿಸಿದೆ.ಮೂಲತಃ ಮಡಿಕೇರಿಯವರಾಗಿದ್ದು,
ದ.ಕ.ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ರೌಡಿಶೀಟರ್ ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಎಸ್.ಐ.ನಂದಕುಮಾರ್ ಅವರು ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಮುಂಬಡ್ತಿಯಾಗಿದ್ದಾರೆ.
ಮಡಿಕೇರಿ ತಾಲೂಕಿನಿಂದ ಬಂಟ್ವಾಳದ ನಗರ ಪೋಲೀಸ್ ಠಾಣೆಗೆ ಕಾಲಿರಿಸಿದ ಬಳಿಕ ದ.ಕ.ಜಿಲ್ಲೆಯಲ್ಲಿ ತನ್ನದೇ ಹೆಸರನ್ನು ಉಳಿಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎತ್ತಿದ ಕೈ ಎಂಬ ಮಾತನ್ನು ಪೋಲಿಸ್ ಇಲಾಖೆಯಲ್ಲಿ ನಮೂದಾಗಿಸಿದ್ದಾರೆ.
ಬಂಟ್ವಾಳದ ಬಳಿಕ ಪುತ್ತೂರು ನಗರ ,ಬೆಳ್ತಂಗಡಿ, ಪ್ರಸ್ತುತ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದಾರೆ.
ಜಿಲ್ಲೆಯ ಅನೇಕ ಸಂಕಷ್ಟದ ಸಮಯದಲ್ಲಿ ಪ್ರತಿಯೊಂದು ಠಾಣೆಯಲ್ಲಿ ಮೇಲಾಧಿಕಾರಿಗಳ ಅದೇಶದಂತೆ ಕರ್ತವ್ಯವನ್ನು ನಿರ್ವಹಿಸಿದವರು.
ಬಂಟ್ವಾಳ ಅಶ್ರಫ್ ಕಲಾಯಿ, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಚೂರಿ ಇರಿತದ ಅರೋಪಿಗಳ ಪತ್ತೆ, ಬೆಳ್ತಂಗಡಿ ಮಗು ಅಪಹರಣ, ಉಪ್ಪಿನಂಗಡಿ ಗಲಾಟೆ , ದಿಗಂತ್ ನಾಪತ್ತೆ,ವಿಟ್ಲ ಬ್ಯಾಂಕ್ ದರೋಡೆ, ನಕಲಿ ಐಡಿ ದಾಳಿ ಸಹಿತ ಅನೇಕ ಪ್ರಕರಣಗಳನ್ನು ದಡ ಸೇರಿಸಿದ ಟೀಮ್ ನಾಯಕರಲ್ಲಿ ಇವರು ಒಬ್ಬ ಎಂಬುದು ಸತ್ಯ.
ಇದೀಗ ನಂದಕುಮಾರ್ ಅವರಿಗೆ ಪದೋನ್ನತಿ ನೀಡಿ ಮಂಗಳೂರು ಡಿ.ಎಸ್.ಬಿ.ಕಚೇರಿಗೆ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.


