Saturday, July 5, 2025

ವ್ಯಕ್ತಿತ್ವ ಎಂಬ ಚಿತ್ತಾರ ಕ್ಕೆ ಶಿಬಿರಗಳಿಂದ ಆತ್ಮಶಕ್ತಿ: ಹಿರಿಯ ಪತ್ರಕರ್ತ ಪುಷ್ಪರಾಜ್

ಮಂಗಳೂರು: ಚಿಂತನ ಸಾಂಸ್ಕೃತಿಕ ಬಳಗ (ರಿ) ಆಕಾಶಭವನ ಮಂಗಳೂರು ಇದರ ಆಶ್ರಯದಲ್ಲಿ *ಚಿತ್ತಾರ2019* ಮಕ್ಕಳ ಬೇಸಿಗೆ ಶಿಬಿರ, ಆಕಾಶಭವನದ ಪರಪಾದೆ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಹಿರಿಯ ಪತ್ರಕರ್ತ, ವಾರ್ತಾಭಾರತಿ ಮಂಗಳೂರು ವಿಭಾಗದ ಮುಖ್ಯಸ್ಥ ಪುಷ್ಪರಾಜ್ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರವಾಹದಲ್ಲಿ ಮುಳುಗುವವರಿಗೆ ಹುಲ್ಲು ಕಡ್ಡಿ ಆಸರೆ. ಅದರಿಂದಲೇ ಬದುಕಬಹುದು ಎಂದಲ್ಲ. ಆ ಕ್ಷಣದಲ್ಲಿ ಅದು ಮಾನಸಿಕ ಧೈರ್ಯ ಸಿಗುತ್ತದೆ. ಅದೇ ರೀತಿ, ಇಂತಹ ಶಿಬಿರಗಳು ಮಕ್ಕಳ ಭವಿಷ್ಯದಲ್ಲಿ ಆತ್ಮಶಕ್ತಿ ಹೆಚ್ಚಿಸುತ್ತದೆ ಎಂದು ಪುಷ್ಪರಾಜ್ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿರಾದ ಮೈಮ್ ರಾಮದಾಸ್ ವಹಿಸಿದ್ದರು ಮುಖ್ಯ ಅತಿಥಿ ಗಳಾಗಿ ರಂಗ ಸ್ವರೂಪ ದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತ್ ಬೈಲ್, ವಕೀಲರಾದ ಕೆ. ಶ್ರೀಪತಿ ಪ್ರಭು, ಚಿಂತನ ಬಳಗದ ಅಧ್ಯಕ್ಷ ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು, ಶಿಬಿರ ಸಂಯೋಜಕ ಸುಕೇಶ್ ಶೆಟ್ಟಿ ಸ್ವಾಗತಿಸಿದರು, ಶಿಬಿರದ ನಿರ್ದೇಶಕರಾದ ಪ್ರೇಂನಾಥ್ ಮರ್ಣೆ ಪ್ರಸ್ತಾಪಿಸಿದರು, ದಯಾನಂದ ವಂದಿಸಿದರು.
ಕಮಲಾಕ್ಷ ಶೆಟ್ಟಿ, ರೇಖಾ ಕುಂದರ್, ಚಿತ್ರ ಲೇಖಾ, ಯಕ್ಷಿತ್, ಸುಜನ್, ವಿನೀತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More from the blog

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...

Bhandaribettu : ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು – ಪುರಸಭೆ, ಕಂದಾಯ ಇಲಾಖೆಯಿಂದ ತೆರವು ಕಾರ್ಯ

ಬಂಟ್ವಾಳ : ಬಿಸಿರೋಡು - ವಿಲ್ಲಾಪುರಂ ರಾಜ್ಯ ಹೆದ್ದಾರಿಗೆ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ, ಕಕ್ಕೆ ಪದವು ನಿವಾಸಿ ರವಿ ಎಂಬವರ ಸ್ಕೂಟರ್ ಹಾನಿಯಾಗಿ, ಅವರು ಗಾಯಗೊಂಡಿದ್ದಾರೆ. ಬಂಟ್ವಾಳ ಪುಂಜಾಲಕಟ್ಟೆ ರಾಷ್ಟೀಯ ಹೆದ್ದಾರಿ ಬಿ.ಸಿ.ರೋಡ್...