ಮಡಾವು : ನಾಯಿಯನ್ನು ಕೊಂಡುಹೋದ ಚಿರತೆ

0
802

ಬಂಟ್ವಾಳ: ಚಿರತೆಯೊಂದು ಮನೆಯಂಗಳದಿಂದ ನಾಯಿಯನ್ನು ಕೊಂದು ಕೊಂಡು ಹೋದ ನಿನ್ನೆ ಮುಂಜಾನೆ ಮಡಾವು ಎಂಬಲ್ಲಿ ನಡೆದಿದೆ
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಡಾವು ನಿವಾಸಿ ಕುಸುಮಾ ಶೆಟ್ಟಿ ಅವರ ಮನೆಯ ಅಂಗಳದಿಂದ ಮುಂಜಾನೆ ಸುಮಾರು ಮೂರು ಗಂಟೆಯ ವೇಳೆ ಗೆ ನಾಯಿಯನ್ನು ಚಿರತೆ ಎತ್ತುಕೊಂಡು ಹೋಗಿದೆ.
ನಾಯಿ ಜೋರಾಗಿ ಕೂಗಿದ್ದನ್ನು ಕಂಡು ಮನೆಯವರು ಎಚ್ಚರಗೊಂಡು ನೋಡುತ್ತಿದ್ದಂತೆ ಚಿರತೆ ನಾಯಿಯನ್ನು ಕೊಂದು ಕೊಂಡುಹೋಯಿತು.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳತ್ತಿದ್ದು ಸ್ಥಳೀಯ ರು ಬಾರೀ ಆತಂಕಗೊಳಗಾಗಿದ್ದಾರೆ.
ಜೊತೆಗೆ ಬಂಟ್ವಾಳ ಅರಣ್ಯ ಇಲಾಖೆ ಗೆ ಲಿಖಿತ ವಾಗಿ ದೂರು ಕೂಡಾ ನೀಡಿದ್ದಾರೆ.
ಹೆಚ್ಚಿನ ರೀತಿಯಲ್ಲಿ ಇಲ್ಲಿನ‌ ಸಾರ್ವಜನಿಕರಿಗೆ ತೊಂದರೆ ಯಾಗುವ ಮೊದಲು ಇಲಾಖೆ ಎಚ್ಚೆತ್ತಕೊಂಡು ಚಿರತೆಯ ಕಾಟದಿಂದ ವಿಮುಕ್ತಿಗೊಳಿಸಲು ಈ ಭಾಗದ ಜನರು ಇಲಾಖೆ ಯ ಮೊರೆ ಹೋಗಿದ್ದಾರೆ.

LEAVE A REPLY

Please enter your comment!
Please enter your name here