Tuesday, February 11, 2025

ಫೆ.22 ರಿಂದ ಫೆ.28 ವರೆಗೆ ಚಟ್ಟೆಕಲ್ ಜುಮಾ ಮಸೀದಿ ವಠಾರದಲ್ಲಿ 7 ನೇ ಬ್ರಹತ್ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ

ಬಂಟ್ವಾಳ: ಜಲಾಲಿಯ್ಯ ಜುಮಾ ಮಸ್ಜಿದ್ ಚಟ್ಟೆಕಲ್ ಸಜಿಪ ಇವರ ಆಶ್ರಯದಲ್ಲಿ ಯನಪೋಯ ಆಸ್ಪತ್ರೆ, ದಂತ ಕಾಲೇಜು ಮತ್ತು ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ ಹಾಗೂ 7 ನೇ ಬ್ರಹತ್ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ ಫೆ.22 ರಿಂದ ಫೆ.28 ವರೆಗೆ ಚಟ್ಟೆಕಲ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ಫೆ.22ರಂದು ಸ್ವಲಾತ್ ವಾರ್ಷಿಕ ನಡೆಯಲಿದ್ದು, ಅಸ್ಸೈಯದ್ ಕೂರತ್ ತಂಙಳ್ ನೇತೃತ್ವ ನೀಡಲಿದ್ದಾರೆ. ಫೆ.23ರಂದು ಕುತುಬಿಯ್ಯತ್ ಜಿಸ್ತಿಯಾ ಕಾರ್ಯಕ್ರಮ ಜರುಗಲಿದ್ದು, ಸೈಯದ್ ಯು.ಪಿ.ಎಸ್.ಕಾಸಿಂ ತಂಙಳ್ ಹಾಗೂ ಮುಹಮ್ಮದ್ ಆಲಿ ಮದನಿ ಕೀಯಿಕ್ಕೋಡ್ ಪಾಲ್ಗೊಂಳ್ಳಲಿದ್ದಾರೆ. ಫೆ.24ರಂದು ಬೆಳಿಗ್ಗೆ ಮೆಡಿಕಲ್ ಕ್ಯಾಂಪ್ ಹಾಗೂ ಫೆ.25ರಂದು ಸೈಯದ್ ಆದೂರು ತಂಙಳ್ ದುಆ ನೇತೃತ್ವದೊಂದಿಗೆ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಪ್ರವಚನ ನೀಡಲಿದ್ದಾರೆ.
ಫೆ.26ರಂದು ಸೈಯದ್ ತ್ವಾಹ ತಂಙಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಜರುಗಲಿದೆ. ಫೆ.27ರಂದು ಉಮರ್‍ ಮುಸ್ಲಿಯಾರ್‍ ಮರ್ಧಾಳ ಪ್ರವಚನ ನೀಡಲಿದ್ದು, ಸೈಯದ್ ಶಹೀರ್‍ ತಂಙಳ್ ಮಳ್ಹರ್‍ ದುಆಗೆ ನೇತೃತ್ವ ನೀಡಲಿದ್ದಾರೆ. ಸಮಾರೋಪ ದಿನವಾದ ಫೆ. 28ರಂದು ಸೈಯದ್ ಚಟ್ಟೆಕ್ಕಲ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ. ಬಳಿಕ ಪೇರೋಡ್ ಮಹಮ್ಮದ್ ಅಝ್ಹರಿ ಪ್ರವಚನ ನೀಡಲಿದ್ದು, ಸೈಯದ್ ಸುಹೈಲ್ ತಂಙಳ್ ಕಣ್ಣೂರು ದುಆಗೆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

More from the blog

ಮನೆಗೆ ಬೆಂಕಿ

ಬಡಕಬೈಲ್: ಗೋಣಿ ಚೀಲ ವ್ಯಾಪಾರಿ ಮೋನಾಕ ಎಂಬವರ ಮನೆಗೆ ಆಕಸ್ಮಿಕಾ ಬೆಂಕಿ ಅನಾಹುತ. ಯಾವುದೇ ಸಾವು-ನೋವು ಸಂಭವಿಸಿಲ್ಲ. ತಡರಾತ್ರಿ ಘಟನೆ ಬೆಂಕಿ‌ ನಂದಿಸಲು ಅಗ್ನಿ ಶಾಮಕದಳ ಹರಸಾಹಸ ಶಾರ್ಟ್ ಸರ್ಕ್ಯೂಟ್ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು...

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...