Thursday, January 29, 2026

ಬ್ಯಾನರ್ ಕದ್ದವರ ಗಮನಕ್ಕೆ

ಬಂಟ್ವಾಳ: ಬ್ಯಾನರ್ ಕದ್ದವರ ಗಮನಕ್ಕೆ ಎಂಬ ಬ್ಯಾನರ್ ಒಂದು ಅಳವಡಿಸಿ ಸಾರ್ವಜನಿಕರ ಗಮನ ಸೆಳೆಯಲಾಗಿದೆ.

ಇದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸಕೋಡಿ ಪೆಟ್ರೋಲ್ ಪಂಪ್ ಬಸ್ ನಿಲ್ದಾಣ ಮತ್ತು ಕಶೆಕೋಡಿ ಬಸ್ ನಿಲ್ದಾಣ ದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಕೋರಿ ಹಾಕಲಾಗಿದ್ದ ಬ್ಯಾನರ್ ನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ.
ಕಶೆಕೋಡಿ ಸೂರ್ಯ ಭಟ್ ಅವರ ಕಲಾಶ್ರಯದಲ್ಲಿ ನಡೆಯಲಿರುವ ಸಾರ್ಜನಿಕ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಸರ್ವ ರಿಗೂ ಆಮಂತ್ರಣ ಕೋರಿ ಬುಧವಾರ ಬೆಳಿಗ್ಗೆ ಎರಡು ಬಸ್ ನಿಲ್ದಾಣದ ಲ್ಲಿ ಬ್ಯಾನರ್ ಹಾಕಲಾಗಿತ್ತು.
ಆದರೆ ರಾತ್ರಿಯಾಗುತ್ತಿದ್ದಂತೆ ಎರಡು ಬ್ಯಾನರ್ ಗಳು ಮಾಯವಾಗಿದೆ. ಯಾರೋ ಕಿಡಿಗೇಡಿಗಳು ಈ ಬ್ಯಾನರ್ ನ್ನು ಕಳವು ಮಾಡಿದ್ದಾರೆ.
ಇದು ಬ್ಯಾನರ್ ಕಳವಿನ ಪ್ರಶ್ನೆಯಲ್ಲ, ಇಲ್ಲಿ ನಿರಂತರವಾಗಿ ಕಳವು ನಡೆಯುತ್ತಿದ್ದು ಅವರ ಗಮನಕ್ಕೆ ಬರಲಿ ಎಂದು ಬ್ಯಾನರ್ ಹಾಕಿದ್ದೇನೆ ಎಂದು ಕಲಾಶ್ರಯದ ಮುಖ್ಯಸ್ಥ ಸೂರ್ಯ ಭಟ್ ತಿಳಿಸಿದ್ದಾರೆ.
ಅಂದ ಹಾಗೆ ಬ್ಯಾನರ್ ನಲ್ಲಿ ಏನಿದೆ ಅಂತ ಗೊತ್ತಾ, ಬ್ಯಾನರ್ ಗಳನ್ನು ಕದ್ದವರ ಗಮನಕ್ಕೆ ನಿಮ್ಮ ಮನೆಯವರ ಹೆಣಕ್ಕೆ ಹೊದಿಸಲು ಬಟ್ಟೆಯನ್ನು ಕೇಳಿದ್ದರೆ ಉಚಿತವಾಗಿ ಕೊಡುತ್ತಿದ್ದೆವು, ವರಮಹಾಲಕ್ಮೀ ಪೂಜೆಯ ಬ್ಯಾನರ್ ಗಳನ್ನು ಕದಿಯುವ ಅಗತ್ಯ ವಿರಲಿಲ್ಲ ಎಂದು ಬರೆಯಲಾಗಿದೆ.

ಕಳ್ಳತನ ನಿರಂತರ: ಇಲ್ಲಿ ಜನರಿಗೆ ಉಪಯೋಗ ಆಗಲಿ ಎಂದು ವಿಶ್ವ ಹಿ‌ಂದೂ ಪರಿಷತ್ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಕಲಾಶ್ರಯ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಶೆಕೊಡಿ ಹಾಗೂ ದಾಸಕೋಡಿ ಪೆಟ್ರೋಲ್ ಪಂಪ್ ಬಳಿ ಎರಡು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಅದಕ್ಕೆ ಇಂಟರ್ ಲಾಕ್ ಗಳನ್ನು ಅಳವಡಿಸಲಾಗಿತ್ತು, ಆದರೆ ಆ ಇಂಟರ್ ಲಾಕ್ ಗಳನ್ನು ಕೂಡ ಕಳವು ಮಾಡಲಾಯಿತು.
ಬಳಿಕ ಸಾರ್ವಜನಿಕ ರಿಗೆ ಬಾಯಾರಿಕೆ ಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು , ಆ ನೀರಿನ ಡ್ರಮ್ ನ್ನೆ ಕದ್ದು ಕೊಂಡು ಹೋದರು, ಬಸ್ ನಿಲ್ದಾಣದ ಒಳಗೆ ಪ್ರಾಣಿಗಳು ಬರಬಾರದು ಎಂಬ ಉದ್ದೇಶದಿಂದ ಸ್ಟೀಲ್ ರಾಡ್ ಗಳನ್ನು ಹಾಕಲಾಗಿತ್ತು ಅದನ್ನು ಕೊಂಡು ಹೋದರು. ರಾತ್ರಿ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಸೋಲಾರ್ ದಾರಿ ದೀಪದ ವ್ಯವಸ್ಥೆ ಯನ್ನು ಮಾಡಲಾಯಿತು, ಸೋಲಾರ್ ಬ್ಯಾಟರಿ ಹಾಗೂ ದೀಪಗಳನ್ನು ಕದಿಯಲಾಯಿತು.
ಈ ರೀತಿಯಲ್ಲಿ ನಿರಂತರವಾಗಿ ಕಳವು ಮಾಡುವ ಕಳ್ಳರ ಕಾಟ ತಡೆಯಲಾರದೆ ಕೊನೆಗೆ ಬ್ಯಾನರ್ ಹಾಕಿದ್ದೇನೆ ಎಂದು ಅನೇಕ ಕುಟುಂಬಗಳ ಅನ್ನದಾತ , ಆಶ್ರಯದಾತ ಸಾರ್ವಜನಿಕ ಸೇವಕ ಕಲಾಶ್ರಯ ದ ಸ್ಥಾಪಕ ಸೂರ್ಯ ಭಟ್ ಕಶೆಕೋಡಿ ಹೇಳಿದ್ದಾರೆ.

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...