ಬಂಟ್ವಾಳ: ಮೂಡುಪಡುಕೋಡಿ ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟಿಸುವ ಗೈಡ್ಸ್ ವಿಭಾಗದ ಅತ್ಯುನ್ನತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪಡೆಯಲಿರುವರು.

ಉತ್ತೀರ್ಣಗೊಂಡ ವಿದ್ಯಾರ್ಥಿಗಳಾದ ತಬಸ್ಸುಮ್, ಸಾರಿಕಾ ಎಸ್. ಗಟ್ಟಿ, ನಿಮ್ರಾ ಬಾನು, ಸಾಕ್ಷಾ ಶೆಟ್ಟಿ, ಶೇಕ್ ಸಾದಿಯಾ, ದಿಯಾ ಎಸ್. ಶೆಟ್ಟಿ, ಮೈತ್ರಿ ಜಿ. ಪಿ. ಅವರಿಗೆ ಶಾಲಾ ಗೈಡ್ಸ್ ಶಿಕ್ಷಕಿ ವನಿತಾ ಶೆಟ್ಟಿ ತರಬೇತಿ ನೀಡಿರುತ್ತಾರೆ. ಸಂಸ್ಥೆಯ ಸಂಚಾಲಕ ಜ| ಶೇಕ್ ರಹ್ಮತ್ತುಲ್ಲಾ ಮತ್ತು ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವೃಂದ ಅಭಿನಂದಿಸುತ್ತಾರೆ.