ಪುಂಜಾಲಕಟ್ಟೆ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಬಂಟ್ವಾಳ ಇದರ 19ನೇ ವರ್ಷದ ವಾರ್ಷಿಕ ಸಂಭ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು . ಬಿ. ರಮಾನಾಥ ರೈ ಮಾಜಿ ಅರಣ್ಯ ಸಚಿವರು ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿರುವ ಈ ಸಂಸ್ಥೆ ಶಾಲೆಯು ಹೊಂದಿರಬೇಕಾದ ಮೂಲ ಸೌಕರ್ಯಗಳನ್ನು ಹೊಂದಿದ್ದು, ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮವು ಬೇಬಿ ಕುಂದರ್ ಅಧ್ಯಕ್ಷರು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಬಂಟ್ವಾಳ, ಇವರು ಶೈಕ್ಷಣಿಕವಾಗಿ ಶಾಲೆಯು ಪ್ರಗತಿಪಥದತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.



ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದ ಉದ್ಘಾಟನೆಯು ಡಾ| ಸತೀಶ್ ಎಮ್.ಸಿ. ವೈದ್ಯಾಧಿಕಾರಿಗಳು ಪ್ರಾ. ಆ. ಕೇಂದ್ರ ಪುಂಜಾಲಕಟ್ಟೆ ಇವರಿಂದ ನೆರವೇರಿತು. ಸೌಮ್ಯ ಜಿ. ಸಬ್ ಇನ್ಸ್ಪೆಕ್ಟರ್ ಪುಂಜಾಲಕಟ್ಟೆ ಇವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮನೆಯೇ ಮೊದಲ ಪಾಠಶಾಲೆಯಾದ್ದರಿಂದ, ನಮ್ಮ ಸಂಸ್ಕೃತಿಯ ಬೆಳವಣಿಗೆ ಮನೆಯಿಂದಲೇ ಆರಂಭವಾಗುವಲ್ಲಿ ಪೋಷಕರ ಜವಾಬ್ದಾರಿ ಮಹತ್ತರವಾದದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಗಮನಹರಿಸಬೇಕು, ರಸ್ತೆಯ ಸುರಕ್ಷತೆ, ಮೊಬೈಲ್ನ ದುರ್ಬಳಕೆ ಆಗದಂತೆ ಪೋಷಕರು ನೋಡಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಬಹುಮಾನ ವಿತರಿಸಿದ ಸೀತಾರಾಮ ಶೆಟ್ಟಿ ಸೇವಾ ಇವರು 12 ಮಕ್ಕಳೊಂದಿಗೆ ಆರಂಭಗೊಂಡ ಈ ಶಾಲೆಯನ್ನು ನಾನು ಉದ್ಘಾಟಿಸಿದ್ದು, ಇಂದು ಗ್ರಾಮೀಣ ಪ್ರದೇಶದ ಅದೆಷ್ಟೋ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಕಂಡಿದೆ. ಪ್ರತಿ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದವರೆಗೂ ಸ್ಪರ್ಧಿಸಿರುವುದು ಶ್ಲಾಘನೀಯ ಎಂದರು. ಜನಾಬ್ ಅಬ್ದುಲ್ ಲತೀಫ್ ವಿಟ್ಲ, ನ್ಯೂಸ್ ರಿಪೋರ್ಟರ್ ಮತ್ತು ಕಾರ್ಯದರ್ಶಿಗಳು ಅಮೆಚೂರು ಕಬ್ಬಡ್ಡಿ ಬಂಟ್ವಾಳ ಇವರು ಪುಸಕ್ತದಲ್ಲಿ ಇಂಗ್ಲೀಷ್ನ ಪ್ರಾಮುಕ್ಯತೆಯನ್ನು ಒತ್ತಿ ಹೇಳಿದರು. ರಮೇಶ್ ಕುಡ್ಮೇರು ಸದಸ್ಯರು ತಾಲೂಕು ಪಂಚಾಯತ್ ಬಂಟ್ವಾಳ ಇವರು ಶಾಲೆಯ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಜನಾಬ್ ಅಬ್ಬಾಸ್ ಆಲಿ, ಉಪಾಧ್ಯಕ್ಷರು ಬಂಟ್ವಾಳ ತಾಲೂಕು ಪಂಚಾಯತು, ಸುಧೀರ್ ಶೆಟ್ಟಿ ಗ್ರಾ. ಪಂ. ಸ. ಇರ್ವತ್ತೂರು, ಮೋಹನ್ ಶೆಟ್ಟಿ ನರ್ವಲ್ದಡ್ಡ ಸಿವಿಲ್ ಕಂಟ್ರಾಕ್ಟರ್, ಜನಾಬ್ ಹಸನ್ ಸಾಹೇಬ್ ಅಧ್ಯಕ್ಷರು ಖಮರುಲ್ ಇಸ್ಲಾಂ, ಜನಾಬ್ ಟಿ. ನವಾಝ್ ಅದ್ಯಕ್ಷರು ಶಿಕ್ಷಕ – ರಕ್ಷಕ ಸಂಘ, ಮಾಸ್ಟರ್ ಮುಹಮ್ಮದ್ ಇರ್ಶಾನ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಜನಾಬ್ ಶೇಕ್ ರಹ್ಮತ್ತುಲ್ಲಾ ಸ್ವಾಗತಿಸಿ, ಜಯಶ್ರೀ.ಬಿ ವರದಿ ವಾಚಿಸಿದರು, ಶೋಭಾ ಹಾಗೂ ಚಂದ್ರಾವತಿ ನಿರೂಪಣೆಗೈದು, ಶಾಲಿನಿ, ಎಲ್ಸಿ. ವಿಕೆ. ವಂದಿಸಿದರು.