ಬಂಟ್ವಾಳ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಬಂಟ್ವಾಳ ದ.ಕ. ಇದರ 19ನೇ ವಾರ್ಷಿಕೋತ್ಸವವು ಡಿ. 31ರಂದು ಗಂಟೆ ೧೦.೦೦ಕ್ಕೆ ಬಿ. ರಮಾನಾಥ ರೈ ಮಾಜಿ ಅರಣ್ಯ ಪರಿಸರ ಜೀವಿಶಾಸ್ತ್ರ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಳ್ಳಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ನಾಯಕ್ ಯು. ಎಮ್.ಎಲ್.ಎ ಬಂಟ್ವಾಳ ಇವರು ವಹಿಸಲಿದ್ದಾರೆ. ಅದೇ ದಿನ ಗಂಟೆ 9ಕ್ಕೆ ಸರಿಯಾಗಿ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮವು ಡಾ| ಸತೀಶ್ ಎಮ್.ಸಿ. ವೈದ್ಯಾಧಿಕಾರಿಗಳು ಪ್ರಾ. ಆ. ಕೇಂದ್ರ ಪುಂಜಾಲಕಟ್ಟೆ ಇವರಿಂದ ಉದ್ಘಾಟನೆಗೊಳ್ಳಲಿದೆ. ಸಮಾರಂಭದಲ್ಲಿ ಸೌಮ್ಯ ಜಿ. ಸಬ್ ಇನ್ಸ್ಪೆಕ್ಟರ್ ಪುಂಜಾಲಕಟ್ಟೆ ಇವರಿಂದ ದಿಕ್ಸೂಚಿ ಭಾಷಣವಿರುವುದು. ವಾರ್ಷಿಕೋತ್ಸವ ಸಮಾರಂಭಕ್ಕೆ ತಮ್ಮೆಲ್ಲರನ್ನು ಆತ್ಮೀಯವಾಗಿ ಆದರದಿಂದ ಸಂಸ್ಥೆಯ ಸಂಚಾಲಕರು ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿ ವೃಂದವು ಸ್ವಾಗತಿಸುತ್ತದೆ.

