ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಇಲ್ಲಿ ಮೊಡಂಕಾಪು ರೋಟರಿ ಕ್ಲಬ್ ಅಧ್ಯಕ್ಷ ಇಲಿಯಾಸ್ ಸಾಂಟಿಸ್ಟ್ ಅವರ ಅನುಪಸ್ಥಿತಿಯಲ್ಲಿ ನಿಯೋಜಿತ ಅಧ್ಯಕ್ಷ ಪ್ರೊಫೆಸರ್ ಡಾಕ್ಟರ್ ಕೆ ಗೋವರ್ಧನ್ ರಾವ್, ಸೆಕ್ರೆಟರಿ ಪಿ ಎ ರಹೀಂ ಹಾಗೂ ಸದಸ್ಯ ಯೂಸುಫ್ ಇವರ ಉಪಸ್ಥಿತಿಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ‘ವಿದ್ಯಾ ಸೇತು’ -ಜ್ಞಾನಾಭಿವೃದ್ಧಿಗೆ ಒಂದು ಕೈಪಿಡಿ ಪುಸ್ತಕವನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ಪುಸ್ತಕದ ಪ್ರಯೋಜನವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ಬಾಳಿ ದೇಶಕ್ಕೆ ಹೆಮ್ಮೆ ತರುವ ಕೆಲಸವನ್ನು ಮಾಡಿ ಎಂದು ಶುಭ ಹಾರೈಸಿದ ಪಿ ಎ ರಹಿಂ ಮತ್ತು ಪ್ರೊಫೆಸರ್ ಡಾಕ್ಟರ್ ಕೆ ಗೋವರ್ಧನ್ ರಾವ್ ರವರಿಗೆ ಹಾಗೂ ರೋಟರಿ ಕ್ಲಬ್ ಮೊಡಂಕಾಪುವಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೂಶಾರದಾ ಪ್ರೌಢ ಶಾಲಾ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳೆಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

