ಬಂಟ್ವಾಳ : ಬೊಳ್ಳಾರಿ ತುಂಬೆ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ಚುಚ್ಚುಮದ್ದು, ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಾಗೂ ICDS ದಿನಾಚರಣೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಹೇಮಲತಾ ಜಿ. ಪೂಜಾರಿ, ಎಂ. ಬಿ. ಕೆ.ಯರಾದ ಶಶಿಕಲಾ, ಆಶಾಕಾರ್ಯಕರ್ತೆ ರೋಹಿಣಿ, A.N.M ಹಿತಾಶ್ರೀ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಕಾರ್ಯಕ್ರಮ ವನ್ನು ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಉಷಾ ವಂದಿಸಿದರು.

