ವಿಟ್ಲ: ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಟ್ಲ ಪ್ರಖಂಡ ಇದರ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಯೋಧ್ಯಾಧಿಪತಿ ಪ್ರಭು ಶ್ರೀ ರಾಮಚಂದ್ರನ ಜನ್ಮಭೂಮಿಯ ಮುಕ್ತಿಗಾಗಿ ವೀರ ಬಲಿದಾನಗೈದ ಕರಸೇವಕರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಭಾನುವಾರ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ| ಕೃಷ್ಣ ಪ್ರಸನ್ನ ವಹಿಸಿದ್ದರು.
ವಿಟ್ಲ ಆರಕ್ಷಕ ಠಾಣೆಯ ಉಪ ನಿರೀಕ್ಷಕ ವಿನೋದ್ ರೆಡ್ಡಿ ಭಾಗವಹಿಸಿದ್ದರು. ಪ್ರಖಂಡ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ, ಕೆ.ಎಂ.ಸಿ. ಆಸ್ಪತ್ರೆ ಬ್ಲಡ್ ಬ್ಯಾಂಕ್ನ ವೈದ್ಯೆ ಡಾ| ನೇಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ಕುಮಾರ್ ಇಡ್ಯಾಳ ವಿಟ್ಲ, ಪ್ರಖಂಡ ಕಾರ್ಯದರ್ಶಿ ಚರಣ್ ಕಾಪುಮಜಲು, ಸಹ ಕಾರ್ಯದರ್ಶಿ ಮನೋಜ್ ಕಾಶೀಮಠ, ಪ್ರಖಂಡ ಸಹ ಸಂಯೋಜಕರಾದ ಚಂದ್ರಹಾಸ ಕನ್ಯಾನ, ಪ್ರಜ್ವಲ್ ಕಂಬಳಬೆಟ್ಟು, ಪ್ರಖಂಡ ಗೋರಕ್ಷಾ ಪ್ರಮುಖ ನಾಗೇಶ್ ಸಾಲೆತ್ತೂರು, ಸಹ ಗೋರಕ್ಷಾ ಪ್ರಮುಖ ಯತೀಶ್ ಪೆರುವಾಯಿ, ವಿಟ್ಲ ನಗರ ಅಧ್ಯಕ್ಷ ವಿಶ್ವನಾಥ ನಾಯಿತೊಟ್ಟು, ಸಂಚಾಲಕ ಸಂದೀಪ್ ಕಾಶೀಮಠ, ದುರ್ಗಾವಾಹಿನಿ ಸಂಯೋಜಕಿ ರೇವತಿ ವಿಟ್ಲ ಉಪಸ್ಥಿತರಿದ್ದರು.
ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕೆ. ಕಲ್ಲಡ್ಕ ಸ್ವಾಗತಿಸಿದರು. ಕಾರ್ಯಧ್ಯಕ್ಷ ಪದ್ಮನಾಭ ಕಟ್ಟೆ ವಂದಿಸಿದರು. ಗೋಪಿಕಾ ಶೆಣೈ ಪ್ರಾರ್ಥಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
10 ಮಹಿಳಾ ರಕ್ತದಾನಿಗಳ ಸಹಿತ 150ಕ್ಕೂ ಅಧಿಕ ಮಂದಿ ಕಾರ್ಯಕರ್ತರು ರಕ್ತದಾನ ನೀಡಿದರು.














