Thursday, June 26, 2025

ನರಿಕೊಂಬು ಬಿರ್ವೆರ್ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ 1ಸಾವಿರಕ್ಕಿಂತಲೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿವಿತರಣೆ

ಬಂಟ್ವಾಳ: ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ವತಿಯಿಂದ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೀಡಾದ ನರಿಕೊಂಬು ಗ್ರಾಮದ 1 ಸಾವಿರಕ್ಕಿಂತಲೂ ಅಧಿಕ ಬಡಕುಟುಂಬಗಳಿಗೆ ಹಾಗೂ 8 ಮಂದಿ ಆಶಾಕಾರ್ಯಕರ್ತಯರಿಗೆ ತಲಾ 10 ಕೆ.ಜಿಯಂತೆ ಅಕ್ಕಿಯನ್ನು ಭಾನುವಾರ ವಿತರಿಸಲಾಯಿತು.

ಟ್ರಸ್ಟ್‌ನ ಕಚೇರಿಯಲ್ಲಿ ಆರೋಗ್ಯ ಸಹಾಯಕಿ ಸಹಿತ ಆಶಾಕಾರ್ಯಕರ್ತಯರಿಗೆ ನರಿಕೊಂಬು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು ಅಕ್ಕಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಟ್ರಸ್ಟಿ ಕೇಶವ ಶಾಂತಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಬಿರ್ವೆರ್ ಸೇವಾ ಟ್ರಸ್ಟ್ ಮೂಲಕ ನರಿಕೊಂಬು ಗ್ರಾಮದ ಸರ್ವ ಜಾತಿ, ಧರ್ಮಗಳ ಜನರಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ಕರೋನಾ ಒಂದನೇ ಅಲೆ ಬಾಧಿಸಿದಾಗಲೂ ಬಡವರಿಗೆ ಅಕ್ಕಿ ವಿತರಿಸಿದ್ದೇವೆ, ಈ ಸಂದರ್ಭದಲ್ಲೂ ನಮ್ಮ ಸೇವಾ ಕಾರ್ಯವನ್ನು ಮುಂದುವರೆಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಟ್ರಸ್ಟ್‌ನ ಅಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ, ಕಾರ್ಯದರ್ಶಿ ಸಂಜೀವ ಎನ್., ಕೋಶಾಧಿಕಾರಿ ಸದಾಶಿವ, ಜೊತೆಕಾರ್ಯದರ್ಶಿ ಸತೀಶ್ ಎನ್., ಸಂಘಟನಾ ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಟ್ರಸ್ಟಿಗಳಾದ ಕೇಶವ ಶಾಂತಿ, ಶ್ರೀಧರ ಪೂಜಾರಿ, ಕೃಷ್ಣಪ್ಪ ಪೂಜಾರಿ, ಯೋಗೀಶ್ ಅಮೀನ್, ನಾರಾಯಣ ಪೂಜಾರಿ, ಸೀತಾರಾಮ, ಶಿವಶಂಕರ್, ಯಜ್ಞಶ್ರೀ, ವೀಣಾ, ರಾಜೇಶ್ ಬೋಳಂತೂರು, ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಬೃಹತ್ ಮತು ಮಧ್ಯಮಕೈಗಾರಿಕೆ ಖಾತೆ ಸಚಿವರ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ನಿರ್ಮಲ್, ಪ್ರಮುಖರಾದ ರಮೇಶ್ ಬೋರುಗುಡ್ಡೆ, ಉಮೇಶ್ ನೆಲ್ಲಿಗುಡ್ಡೆ, ಹರೀಶ್ ಅಂಚನ್ ನರಿಕೊಂಬು, ಪ್ರಕಾಶ್ ಕೋಡಿಮಜಲು, ಸಂಚಾಲಕರಾದ ಚೇತನ್ ಏಲಬೆ, ಮಹೇಶ್ ರಾಯಸ, ದಿವಾಕರ ಅರೆಬೆಟ್ಟು, ಮೋಹನ್ ಕಲ್ಯಾರ್, ಸುರೇಶ್ ಕೋಟ್ಯಾನ್ ಸಜಂಕ್ಪಾಲಿಕೆ, ಮಾಧವ ಕರ್ಬೆಟ್ಟು, ಉದಯ ಶಾಂತಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಟ್ರಸ್ಟ್ ಸದಸ್ಯರು ನರಿಕೊಂಬು ಗ್ರಾಮದ ಮನೆ ಮನೆಗೆ ತೆರಳಿ ಅಕ್ಕಿ ವಿತರಿಸಿದರು.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...