Thursday, February 13, 2025

ಬಿಳ್ಕೋಡುಗೆ

ಸರಕಾರಿ ಉದ್ಯೋಗವಾಗಿದ್ದರೂ ಸೇವೆ ಎಂಬಂತೆ ಭಾವಿಸಿ ಕೆಲಸ ಮಾಡುವುದರಿಂದಾಗಿ ಸಂಸ್ಥೆ ಹಾಗೂ ಸಮಾಜದಲ್ಲಿ ಗುರುತಿಸುವಂತಾಗಿದೆ. ನಮಗೆ ಅನ್ನ ನೀಡಿದ ಸಂಸ್ಥೆ ಗೆ ಯಾವತ್ತೂ  ಋಣಿ ಯಾಗಿರಬೇಕು ಎಂದು  ಬಿ ಎಸ್ ಎನ್ ಎಲ್ ನ ಬಂಟ್ವಾಳ ಮಾರ್ಕೆಟಿಂಗ್ ರಿಟೈಲ್ ಮೆನೇಜರ್ ರಾಗಿರುವ ಕಂಪ ಸದಾನಂದ ಆಳ್ವ ರವರು ವಿದಾಯ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿರಂತರ 37 ವರ್ಷ ಗಳ ಸುದೀರ್ಘ ಸೇವೆ ಯಿಂದ ನಿವೃತ್ತರಾದ ಆಳ್ವ ರವರು ಗೋಣಿಕೊಪ್ಪಲು , ಮೂಡಬಿದ್ರೆ , ಬಂಟ್ವಾಳ ತಾಲೂಕುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ , ಈ ಸಂದರ್ಭದಲ್ಲಿ ಕಮಲಾಕ್ಷಿ ಮಯ್ಯ , ಭಾರತಿ ಶೆಣೈ , ಹಾಗು ಪುರುಷೋತ್ತಮ ನಾಯಕ್ ರವರು ಕೂಡ ನಿವೃತ್ತರಾಗಿದ್ದು ಅವರನ್ನು ಕೂಡ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

 ಬಂಟ್ವಾಳ ಟೆಲಿಕಾಂ ರಿಕ್ರಿಯೇಷನ್ ಕ್ಲಬ್ ವತಿಯಿಂದ ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿ  ನಡೆದ ವಿದಾಯ ಕೂಟ ಸಮಾರಂಭ ದ ವೇದಿಕೆಯಲ್ಲಿ   ಬಿ ಎಸ್ ಎನ್ ಎಲ್ ನ  ಡೆಪ್ಯುಟಿ ಜನರಲ್ ಮ್ಯಾನೇಜರ್ ಗಳಾದ   ವಿಷ್ಣು ಮೂರ್ತಿ ಭಟ್ , ಹಾಗೂ ವಿಜಯಲಕ್ಷ್ಮಿ ಆಚಾರ್ , ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗಳಾದ ಲೋಕೇಶ್ , ಅರುಣ್ ಮಾನ್ವಿ , ಆನಂದ ನಿವೃತ್ತ ಅಧಿಕಾರಿಗಳಾದ ವಿಠ್ಠಲ್ ಭಂಡಾರಿ , ಕೃಷ್ಣ ಶ್ಯಾಮ್ , ಬಿ ವಿ ಉಪಾಧ್ಯ , ಗಣ್ಯರುಗಳಾದ  ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಕಾರಂತ್ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಬಂಟ್ವಾಳ ಬಂಟರ ಸಂಘ ದ ಉಪಾಧ್ಯಕ್ಷ  ಕಿರಣ್ ಹೆಗ್ಡೆ , ಬಂಟ್ವಾಳ ಜನ ಜಾಗ್ರತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಮಹೇಶ್ ಟ್ರಾವೆಲ್ಸ್ ಮಾಲಕರಾದ ಜಯರಾಮ್ ಶೇಕ , ಪುದು ಜಿಲ್ಲಾ ಪಂಚಾಯತ್ ಸದಸ್ಯ  ರವೀಂದ್ರ ಕಂಬಳಿ , ಬಂಟರ ಸಂಘ ಫರಂಗಿಪೇಟೆ ವಲಯ ಅಧ್ಯಕ್ಷ  ಶಶಿರಾಜ್ ಶೆಟ್ಟಿ ಕೊಳಂಬೆ , ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ , ಉದಯವಾಣಿ ವರದಿಗಾರ ರಾಜ ಬಂಟ್ವಾಳ , ರಂಗೋಲಿ ಸದಾನಂದ ಶೆಟ್ಟಿ , ಉದ್ಯಮಿ ಜನಾರ್ಧನ ಅರ್ಕುಳ , ಇರಾ ಬಂಟರ ಸಂಘ ದ ಅಧ್ಯಕ್ಷ ಚಂದ್ರಹಾಸ್ ರಾಯ್ ಬಾಲಾಜಿಬೈಲ್  ಮತ್ತಿತರರು ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...