Saturday, January 31, 2026

ಬಿಳ್ಕೋಡುಗೆ

ಸರಕಾರಿ ಉದ್ಯೋಗವಾಗಿದ್ದರೂ ಸೇವೆ ಎಂಬಂತೆ ಭಾವಿಸಿ ಕೆಲಸ ಮಾಡುವುದರಿಂದಾಗಿ ಸಂಸ್ಥೆ ಹಾಗೂ ಸಮಾಜದಲ್ಲಿ ಗುರುತಿಸುವಂತಾಗಿದೆ. ನಮಗೆ ಅನ್ನ ನೀಡಿದ ಸಂಸ್ಥೆ ಗೆ ಯಾವತ್ತೂ  ಋಣಿ ಯಾಗಿರಬೇಕು ಎಂದು  ಬಿ ಎಸ್ ಎನ್ ಎಲ್ ನ ಬಂಟ್ವಾಳ ಮಾರ್ಕೆಟಿಂಗ್ ರಿಟೈಲ್ ಮೆನೇಜರ್ ರಾಗಿರುವ ಕಂಪ ಸದಾನಂದ ಆಳ್ವ ರವರು ವಿದಾಯ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಿರಂತರ 37 ವರ್ಷ ಗಳ ಸುದೀರ್ಘ ಸೇವೆ ಯಿಂದ ನಿವೃತ್ತರಾದ ಆಳ್ವ ರವರು ಗೋಣಿಕೊಪ್ಪಲು , ಮೂಡಬಿದ್ರೆ , ಬಂಟ್ವಾಳ ತಾಲೂಕುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ , ಈ ಸಂದರ್ಭದಲ್ಲಿ ಕಮಲಾಕ್ಷಿ ಮಯ್ಯ , ಭಾರತಿ ಶೆಣೈ , ಹಾಗು ಪುರುಷೋತ್ತಮ ನಾಯಕ್ ರವರು ಕೂಡ ನಿವೃತ್ತರಾಗಿದ್ದು ಅವರನ್ನು ಕೂಡ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

 ಬಂಟ್ವಾಳ ಟೆಲಿಕಾಂ ರಿಕ್ರಿಯೇಷನ್ ಕ್ಲಬ್ ವತಿಯಿಂದ ಬಂಟ್ವಾಳ ಲಯನ್ಸ್ ಕ್ಲಬ್ ನಲ್ಲಿ  ನಡೆದ ವಿದಾಯ ಕೂಟ ಸಮಾರಂಭ ದ ವೇದಿಕೆಯಲ್ಲಿ   ಬಿ ಎಸ್ ಎನ್ ಎಲ್ ನ  ಡೆಪ್ಯುಟಿ ಜನರಲ್ ಮ್ಯಾನೇಜರ್ ಗಳಾದ   ವಿಷ್ಣು ಮೂರ್ತಿ ಭಟ್ , ಹಾಗೂ ವಿಜಯಲಕ್ಷ್ಮಿ ಆಚಾರ್ , ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗಳಾದ ಲೋಕೇಶ್ , ಅರುಣ್ ಮಾನ್ವಿ , ಆನಂದ ನಿವೃತ್ತ ಅಧಿಕಾರಿಗಳಾದ ವಿಠ್ಠಲ್ ಭಂಡಾರಿ , ಕೃಷ್ಣ ಶ್ಯಾಮ್ , ಬಿ ವಿ ಉಪಾಧ್ಯ , ಗಣ್ಯರುಗಳಾದ  ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಕಾರಂತ್ , ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ , ಬಂಟ್ವಾಳ ಬಂಟರ ಸಂಘ ದ ಉಪಾಧ್ಯಕ್ಷ  ಕಿರಣ್ ಹೆಗ್ಡೆ , ಬಂಟ್ವಾಳ ಜನ ಜಾಗ್ರತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಮಹೇಶ್ ಟ್ರಾವೆಲ್ಸ್ ಮಾಲಕರಾದ ಜಯರಾಮ್ ಶೇಕ , ಪುದು ಜಿಲ್ಲಾ ಪಂಚಾಯತ್ ಸದಸ್ಯ  ರವೀಂದ್ರ ಕಂಬಳಿ , ಬಂಟರ ಸಂಘ ಫರಂಗಿಪೇಟೆ ವಲಯ ಅಧ್ಯಕ್ಷ  ಶಶಿರಾಜ್ ಶೆಟ್ಟಿ ಕೊಳಂಬೆ , ಎಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ , ಉದಯವಾಣಿ ವರದಿಗಾರ ರಾಜ ಬಂಟ್ವಾಳ , ರಂಗೋಲಿ ಸದಾನಂದ ಶೆಟ್ಟಿ , ಉದ್ಯಮಿ ಜನಾರ್ಧನ ಅರ್ಕುಳ , ಇರಾ ಬಂಟರ ಸಂಘ ದ ಅಧ್ಯಕ್ಷ ಚಂದ್ರಹಾಸ್ ರಾಯ್ ಬಾಲಾಜಿಬೈಲ್  ಮತ್ತಿತರರು ಉಪಸ್ಥಿತರಿದ್ದರು.

More from the blog

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...