ಬಂಟ್ವಾಳ, ಎ. 04: ಬೈಕ್ ಸ್ಕಿಡ್ ಆಗಿ ಯುವಕನೋರ್ವ ಗಾಯಗೊಂಡ ಘಟನೆ ಮೂರ್ಜೆ ಎಂಬಲ್ಲಿ ನಡೆದಿದೆ.


ಗಾಯಗೊಂಡವನನ್ನು ಗೇರುಕಟ್ಟೆ ನಿವಾಸಿ ಪದ್ಮನಾಭ ಎಂಬವರ ಮಗ ಸಚಿನ್(21) ಎಂದು ಗುರುತಿಸಲಾಗಿದೆ. ಘಟನೆಯಿಂದ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಎಸ್ಕೆಎಸ್ಸೆಸ್ಸೆಫ್ ಧೂಮಲಿಕೆ ವಿಖಾಯ ತಂಡದ ಚೇರ್ ಮೆನ್ ಫಯಾಝ್ ಎಂಬವರು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.












