ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ಬಂಟ್ವಾಳ ವೃತ್ತ ದ ಪೋಲೀಸರು ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕ ದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಬಂಟ್ವಾಳ, ಬಿಸಿರೋಡು , ಪರಂಗಿಪೇಟೆ, ಕೈಕಂಬ, ವಿಟ್ಲ, ಕಲ್ಲಡ್ಕ ಸೇರಿದಂತೆ ಎಲ್ಲಾ ಪೇಟೆ ಗಳನ್ನು ಸಂಪೂರ್ಣ ಬಂದ್ ಮಾಡಲು ಅವರು ಧ್ವನಿ ವರ್ಧಕ ಬಳಸಿದ್ದಾರೆ

ಬಂಟ್ವಾಳ: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ, ಜನರು ಮನೆಯಲ್ಲಿಯೇ ಇರುವಂತೆ, ರಸ್ತೆಯಲ್ಲಿ ತಿರುಗಾಡದಂತೆ ಧ್ವನಿವರ್ಧಕದ ಮೂಲಕ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹೆಚ್ ಅವರು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ಅವರು ಬಿಸಿರೋಡು, ಬಂಟ್ವಾಳ, ಕೈಕಂಬ ಸೇರಿದಂತೆ ಜನರು ಗುಂಪಾಗಿ ಸೇರುವ ಕಡೆಗಳಲ್ಲಿ ಈ ಪ್ರಯತ್ನದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಬೇರೆ ಅಂಗಡಿಗಳನ್ನು ಮುಚ್ಚಿ ಜಾಗ್ರತೆ ವಹಿಸುವಂತೆ ಮನವಿ ಮಾಡುತ್ತಿದ್ದಾರೆ.

ವಾಹನಗಳೂ ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಈ ಆದೇಶಕ್ಕೆ ಕ್ಯಾರೇ ಅನ್ನದ ಆಟೋ ಚಾಲಕರು ಆಟೋ ಚಲಾಯಿಸುತ್ತಿದ್ದು, ಪೊಲೀಸರು ಆಟೋ ಚಾಲಕರಿಗೆ ಮನವಿ ಮಾಡಿ ಮನೆಯ ಕಡೆ ತೆರಳುವಂತೆ ವಿನಂತಿ ಮಾಡುತ್ತಿದ್ದಾರೆ.
ನಗರದ ಹಲವು ಭಾಗಗಳಲ್ಲಿ ಪೊಲೀಸರು ಜನಜಾಗೃತಿ ಮಾಡುವ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು, ವಾಹನ ಸವಾರರು ರಸ್ತೆಗಿಳಿಯದಂತೆ ಮನವಿ ಮಾಡಿದ್ದು, 144 ಸೆಕ್ಷನ್ ಜಾರಿಯಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ. ಆದರೆ ಪೊಲೀಸರ ಮನವಿಗೂ ಕಿವಿಗೊಡದ ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಕೆಲವು ಅಂಗಡಿಗಳು ಇನ್ನೂ ತೆರದಿವೆ.
ಬಿ.ಸಿ. ರೋಡು ಬಹುತೇಕ ಅಂಗಡಿಗಳು ಮುಂಜಾನೆಯಿಂದಲೇ ಬಂದ್ ಅಗಿತ್ತು. ಅದರೆ 10 ಗಂಟೆ ಬಳಿಕ ಕೆಲವೊಂದು ಅಂಗಡಿಗಳು ತೆರೆಯಲ್ಪಟ್ಟಿತು. ಹಾಗಾಗಿ ಜನರು ಸೇರತೊಡಗಿದರು. ಆ ಸಂದರ್ಭ ಪೋಲೀಸರು ಎಚ್ಚರ ನೀಡುವ ಕೆಲಸ ಮಾಡಿದರು.
ಬಸ್ ಇಲ್ಲದೆ, ಜನರು ಇಲ್ಲದೆ ಬಿಕೋ ಎನ್ನುತ್ತಿರುವ ಕೆ.ಎಸ್.ಅರ್.ಟಿ.ಸಿ. ಬಸ್ ನಿಲ್ದಾಣ. ಸರಕಾರದ ಆದೇಶದಂತೆ ಸರಕಾರಿ ಹಾಗೂ ಖಾಸಗಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹಾಗಾಗಿ ಬಸ್ ನಿಲ್ದಾಣ ಖಾಲಿಯಾಗಿತ್ತು.

