ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು, ಇದರ 2023-24 ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಿತು.

ರೋಟರಿ ಕ್ಲಬ್, ಬಂಟ್ವಾಳದ ಅಧ್ಯಕ್ಷರಾದ ಪ್ರಕಾಶ್ ಬಾಳಿಗ, ಅವರು ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿ ಜೀವನ ಕೌಶಲ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಅದನ್ನು ಅಳವಡಿಸಿ ವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಕವಿತ, ಮುಖ್ಯ ಅತಿಥಿಗಳಾಗಿ ವಾಮನ ಆಚಾರ್ಯ, (ಕಾರ್ಯಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ ), ಅನಂತ ಪದ್ಮನಾಭ (ಉಪ ಪ್ರಾಂಶುಪಾಲರು), ಸ್ವಾಗತ ವನ್ನು ರವಿಚಂದ್ರಮಯ್ಯ, ಪ್ರತಿಜ್ಞಾ ವಿಧಿ ಯನ್ನು ನೂರ್ ಮಹಮ್ಮದ್ ನಡೆಸಿ ಕೊಟ್ಟರು. ವಂದನಾರ್ಪಣೆಯನ್ನು ಶಹನಾಜ್, ಕಾರ್ಯಕ್ರಮ ನಿರೂಪಣೆಯನ್ನು ಯೋಗಿತಾ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರು & ವಿದ್ಯಾರ್ಥಿಗಳು ಭಾಗವಹಿಸಿದರು.

