ಬೆಳ್ತಂಗಡಿ :ಹಲವು ದಿನಗಳ ಕಾಲ ಲಾಕ್’ಡೌನ್’ನಿಂದಾಗಿ ತಮ್ಮ ಊರಿಗೆ ಮರಳಲಾಗದೆ ಪರದಾಡುತ್ತಿರುವವರಿಗೆ ಸುಸಂದರ್ಭ ಎನ್ನುವಂತೆ ತಮ್ಮ ಊರಿಗೆ ಬರುವಂತಹ ಅವಾಕಾಶ ಸಿಕ್ಕಿತು ಎಂದಾಗ “ಊರಿಗೆ ಮಾತ್ರ ಮನೆಗಲ್ಲ” ಅಂತ ಅವರವರ ಊರಿನ ಶಾಲೆಗಳಲ್ಲಿ ಕಾರಂಟೈನ್ ಮಾಡಲಾಯಿತು. ಈ ಸಮಯದಲ್ಲಿ ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವಾಗಿದ್ದಾರೆ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ಆದವರು.

ಮುಂಬಯಿಂದ ಆಗಮಿಸಿದ ಹಲವು ಮಂದಿ ಸುಮ್ಮನೆ ಕೂರದೆ ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಸಮಯದ ಸದುಪಯೋಗ ತಿಳಿಸಿಕೊಟ್ಟಿದ್ದಾರೆ.
ಶಾಲಾ ಆವರಣದ ಸ್ವಚ್ಛತಾ ಕೆಲಸವನ್ನು ಮಾಡಿದರು.ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಚತಾ ಕಾರ್ಯವನ್ನು ಮಾಡಿ ಮಾದರಿಯಾಗಿದ್ದಾರೆ.

ಕೂಕ್ರಬೆಟ್ಟು ಶಾಲೆಯಲ್ಲಿ 25 ಮಂದಿ, ಮರೋಡಿ ಅನುದಾನಿತ ಶಾಲೆಯಲ್ಲಿ 9 ಮಂದಿ, ಮಾವಿನಕಟ್ಟೆ ಶಾಲೆಯಲ್ಲಿ13 ಮಂದಿ ಹಾಗು ಹೋಂ ಕ್ವಾರಂಟೈನ್’ನಲ್ಲಿ 3 ಮಂದಿಯನ್ನು ಇರಿಸಲಾಗಿದ್ದು, ಮುಂಬಯಿಲಿದ್ದ ಒಟ್ಟು 50 ಮಂದಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬೆಳ್ತಂಗಡಿಯ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೊಟ್ಯಾನ್, ರತ್ನಾಕರ ಬುನ್ನಾನ್ ಹಾಗೂ ಊರವರ ಸಹಕಾರದೊಂದಿಗೆ ಊರಿಗೆ ಕರೆತರುವ ಕೆಲಸ ಮಾಡಲಾಗಿದೆ.
ಕ್ವಾರಂಟೈನ್’ನಲ್ಲಿದ್ದವರ ಈ ನಡೆ ಶ್ಲಾಘನೀಯ ಕಾರ್ಯ ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು ಹಾಗು ಆ ಶಾಲೆಯಲ್ಲಿ ಇದ್ದವರ ರಿಪೋರ್ಟ್ ಕೂಡ ನೆಗೆಟಿವ್ ಬಂದಿದ್ದು ಊರವರಿಗೆ ಸಂತಸ ತರುವುದರೊಂದಿಗೆ ಕೊರೊನಾ ಭೀತಿಯ ದಿನಗಳಲ್ಲಿಯೂ ಎದೆಗುಂದದೆ ತಮ್ಮ ಕ್ವಾರಂಟೈನ್ ದಿನಗಳನ್ನು ವಿಭಿನ್ನವಾಗಿಸಿದ್ದಾರೆ.

