ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ಅಳದಂಗಡಿ ಹಾಗೂ ಜನಸ್ನೇಹಿ ಪೊಲೀಸ್ ವಾಟ್ಸಾಪ್ ಗ್ರೂಪ್ ವತಿಯಿಂದ ಲಾಕ್ ಡೌನ್ ಸಮಸ್ಯೆಯ ಈ ದಿನಗಳಲ್ಲಿ ಬಡಗಕಾರಂದೂರು, ಸುಲ್ಕೇರಿಮೊಗ್ರು, ಅಳದಂಗಡಿ ವ್ಯಾಪ್ತಿಯ ಪಿಲ್ಯ, ಕುದ್ಯಾಡಿ ಗ್ರಾಮಗಳಲ್ಲಿ ಅಗತ್ಯ ವಸ್ತುಗಳಿಗಾಗಿ ಹಾತೊರೆಯುವ ಕುಟುಂಬಗಳಿದ್ದಲ್ಲಿ ಅವರಿಗಾಗಿ ‘ಹಸಿವು-ಅನ್ನದ ತುತ್ತು’ ಸೇವಾಯೋಜನೆಯನ್ನು ಮಾಡಬೇಕೆಂದು ಯೋಚಿಸಿದಾಗ ಗ್ರೂಪ್ ನ ಬಹುತೇಕ ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿ 25 ಕ್ವಿಂಟಲ್ ಅಕ್ಕಿ ಹಾಗೂ 250 ಡಬ್ಬ ಉಪ್ಪಿನಕಾಯಿಗೆ ಬೇಕಾಗುವಷ್ಟು ಸಹಕಾರ ಮಾಡಿದ್ದಾರೆ.


ಬೀಟ್ ಪೊಲೀಸ್ ಪ್ರಶಾಂತ್ ಕುಮಾರ್ ಅವರು ಈ ಯೋಜನೆಗೆ ಒಂದು ಕ್ವಿಂಟಲ್ ಅಕ್ಕಿ ನೀಡಿ ಸಹಕರಿಸಿದ್ದಾರೆ. ಈ ತಂಡ ಈಗಾಗಲೇ ಈ ನಾಲ್ಕು ಗ್ರಾಮಗಳಿಗೆ 100-150 ಬಡ ಕುಟುಂಬಗಳ ವಿವರ ಸಿಕ್ಕಿದ್ದು, 60 ಮನೆಗಳಿಗೆ ಅಕ್ಕಿ ಹಾಗೂ ಉಪ್ಪಿನಕಾಯಿ ವಿತರಿಸಿದ್ದಾರೆ.
ಬೀಟ್ ಪೋಲೀಸರ ಈ ಸೇವೆಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

