Wednesday, February 12, 2025

ಬಿಸಿರೋಡಿಗೆ ನೀರಿಲ್ಲ: ಕಾಂಕ್ರೀಟ್ ರಸ್ತೆ ಅಗೆದ ಪುರಸಭೆ

ಬಂಟ್ವಾಳ: ಬಿಸಿರೋಡಿನ ಹೃದಯ ಭಾಗದಲ್ಲಿ ಪುರಸಭಾ ಇಲಾಖೆಗೆ ಸಂಬಂದಿಸಿದ ಕುಡಿಯುವ ನೀರಿನ ಪೈಪ್ ಒಡೆದು ಹೋದ ಪರಿಣಾಮ ಬಿಸಿರೋಡ್ ಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ನೀರಿಲ್ಲ.

ಬಿಸಿರೋಡಿನ ಸರ್ವೀಸ್ ರಸ್ತೆಯ ಕೃಷ್ಣಾನಂದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾಂಕ್ರೀಟ್ ನ ಅಡಿಯಲ್ಲಿ ನೀರಿನ ಪೈಪ್ ಶನಿವಾರ ಒಡೆದು ಹೋಗಿ ನೀರು ಪೋಲಾಗುತ್ತಿತ್ತು.
ಪುರಸಭಾ ಇಲಾಖೆ ಯ ಸಿಬ್ಬಂದಿ ಗಳು
ಸೋಮವಾರ ಬೆಳಿಗ್ಗೆ ಯಿಂದ ಸರ್ವೀಸ್ ರಸ್ತೆ ಯ ವಾಹನ ಸಂಚಾರ ಬಂದ್ ಮಾಡಿ ಕಾಮಗಾರಿ ಪ್ರಾರಂಭಿಸಿದ್ದಾರೆ.
ಬಿಸಿರೋಡ್ ಪೇಟೆ ಗೆ ನೀರಿಣುಸುವ ಹತ್ತು ಇಂಚು ಪಿಯುಸಿ ಪೈಪ್ ಒಡೆದು ಹೋಗಿ ಸಮಸ್ಯೆ ಉಂಟಾಗಿದೆ.
ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಯ ವೇಳೆ ಪಿಯುಸಿ ಪೈಪ್ ಬದಲಾಯಿಸಿ ಬೇರೆ ಪೈಪ್ ಹಾಕಿದ್ದರೆ ಈ ರೀತಿ ಪದೇ ಪದೇ ಪೈಪ್ ಒಡೆಯುವುದು ತಪ್ಪುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಇದೀಗ ಪೈಪ್ ಸರಿಪಡಿಸಲು ಸರ್ವೀಸ್ ರಸ್ತೆಯ ಕಾಂಕ್ರೀಟ್ ನ್ನು ಮೆಷಿನ್ ಬಳಸಿ ಒಡೆಯಲಾಗುತ್ತಿದೆ.
ಬೆಳಿಗ್ಗೆ ಯಿಂದಲೂ ರಸ್ತೆಯನ್ನು ಅಗೆಯುತ್ತಿದ್ದು ರಾತ್ರಿಯವರೆಗೂ ಪೈಪ್ ಲೈನ್ ಸಿಕ್ಕಿಲ್ಲ.
ಕಾಮಗಾರಿ ನಡೆಯುವ ಸ್ಥಳ ಕ್ಕೆ ಸ್ಥಳೀಯ ಜನಪ್ರತಿನಿಧಿ
ಆಗಮಿಸಿದ್ದಾರೆ ಎಂದು ಪೋಲೀಸರಿಗೆ ದೂರು ಕೂಡಾ ಸಲ್ಲಿಕೆಯಾಗಿತ್ತು.
ಬಳಿಕ ಸ್ಥಳ ಕ್ಕೆ ಪೋಲೀಸರು ಆಗಮಿಸಿ ರಾಜಕೀಯ ಪಕ್ಷಗಳ ಯಾರು ಕೂಡಾ ಸ್ಥಳ ಕ್ಕೆ ಬೇಟಿ ನೀಡದಂತೆ ಎಚ್ಚರಿಕೆ ವಹಸಿ ಕಾಮಗಾರಿ ನಡೆಯುತ್ತಿದೆ.

More from the blog

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...