ಬಂಟ್ವಾಳ ತಾಲೂಕು ಸಜೀಪಮೂಡ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 10, 22, 24, 26ರಂದು “ಆಗೇಲು ಸೇವೆ” ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ 10-03-2024ನೇ ಆದಿತ್ಯವಾರದಂದು “ಅಮಾವಾಸ್ಯೆ” ಇರುವುದರಿಂದ “ಆಗೇಲು ಸೇವೆ” ಇರುವುದಿಲ್ಲ. ಹಾಗೂ ಇದೇ ಬರುವ ಮಾರ್ಚ್ 22, 24, 26 ರಂದು ಸಜೀಪ ಮಾಗಣೆ “ಪಡ್ಡೆರಮಾಡ ಜಾತ್ರೆಯ” ಪ್ರಯುಕ್ತ ಕ್ಷೇತ್ರದಲ್ಲಿ “ಆಗೇಲು ಸೇವೆ” ಇರುವುದಿಲ್ಲ ಎಂದು ತಿಳಿಸಿದ್ದಾರೆ.