Tuesday, February 3, 2026

ಬಂಟ್ವಾಳ ಪುರಸಭೆಯಿಂದ ರಸ್ತೆ ಕಡಿತ : ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಟ

ಬಂಟ್ವಾಳ: ನೀರು ಹೋಗಲು ಚರಂಡಿಯನ್ನು ನಿರ್ಮಾಣ ಮಾಡದೇ ಮಳೆ ನೀರು ಹರಿಯಲು ದಾರಿಯಿಲ್ಲದೇ ರಸ್ತೆಯಲ್ಲೇ ಶೇಖರಣೆಯಾದಾಗ ಕೊನೆಗೆ ಕಾಂಕ್ರಿಟೀಕೃತ ರಸ್ತೆಯನ್ನೇ ತುಂಡರಿಸಿ ನೀರನ್ನು ಪಕ್ಕದ ತೋಡಿಗೆ ಜೋಡಿಸಿದ್ದು ರಸ್ತೆಯಿಲ್ಲದೇ ಸಾರ್ವಜನಿಕರು ಪರದಾಡುವಂತಹ ಸನ್ನಿವೇಶ ಕೈಕಂಬದಲ್ಲಿ ಸೃಷ್ಟಿಯಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಬರುವ ಬಿ.ಸಿ.ರೋಡ್ ಕೈಕಂಬದಲ್ಲಿರುವ ಮುದ್ರಣ ಸಂಸ್ಥೆಯ ಬಳಿ  ಹೊಸ ಕಾಂಕ್ರಿಟ್ ರಸ್ತೆಯು ಹೆದ್ದಾರಿಗೆ ಬರಲು ಹತ್ತಿರ ಹಾಗೂ ಕೈಕಂಬದ ವಾಹನ ದಟ್ಟಣೆಯನ್ನು ತಪ್ಪಿಸಲು ಮೊಡಂಕಾಪಿನಿಂದ ಮಂಗಳೂರಿಗೆ ತೆರಳಲು ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಬಿಸಿರುತ್ತಾರೆ.
 ಶಾಲಾ ವಾಹನಗಳಿಗೂ ಈ ರಸ್ತೆಯು ತುಂಬಾ ಅನುಕೂಲವಾಗಿತ್ತು. ಮೊಡಂಕಾಪು ಬಳಿಯ ವಿದ್ಯಾ ಸಂಸ್ಥೆಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಸೈಕಲ್ ಇಲ್ಲವೇ ಕಾಲುದಾರಿಯಾಗಿ ಹೋಗಲು ಈ ರಸ್ತೆಯು ಅವಶ್ಯಕವಾಗಿತ್ತ. ಆದರೆ ಈಗ ರಸ್ತೆಯನ್ನು ಕಡಿತಗೊಳಿಸಿ  ಹೊಂಡ ನಿರ್ಮಿಸಿದ ನಂತರ ಅದರ ಗೋಜಿಗೇ ಹೋಗದೆ ಈ ರಸ್ತೆಯಲ್ಲಿ ಹೋಗುವವರು ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಯನ್ನು ತುಂಡರಿಸಿ ತಿಂಗಳು ಒಂದಾದರೂ ಯಾವುದೇ ಅಧಿಕಾರಿವರ್ಗ ಇತ್ತ ಬರಲಿಲ್ಲ. ಜನರಿಗೆ ಹಾದು ಹೋಗಲು ಯಾವುದೇ ವ್ಯವಸ್ಥೆಯನ್ನೂ ಮಾಡಲಿಲ್ಲ. ಪುಟ್ಟ ಮಕ್ಕಳನ್ನು ಈ ಭಾಗದ ಪೋಷಕರು ಈ ರಸ್ತೆಯಲ್ಲಿ ಕಳುಹಿಸುವುದನ್ನೇ ನಿಲ್ಲಿಸಿದ್ದಾರೆ.
ಇಲ್ಲಿರುವ ರಸ್ತೆಯು ಎರಡು ಬದಿಯಲ್ಲಿ ಎತ್ತರವಾಗಿದ್ದು ಹೊಂಡ ತೋಡಿದ ಭಾಗವು ತಗ್ಗು ಪ್ರದೇಶವಾಗಿದ್ದು ದುರಸ್ತಿಯ ಯಾವುದೇ ನಾಮ ಫಲಕವನ್ನೂ ಹಾಕದೇ ಇರುವುದರಿಂದ ಈ ರಸ್ತೆ ವಾಹನ ಸವಾರರು ರಸ್ತೆಯ ತುಂಡರಿಸಿರುವುದನ್ನು ಮರೆತು ಎಷ್ಟೋ ಜನ ಈ ಹೊಂಡಕ್ಕೆ ಬಿದ್ದ ಘmನೆಯೂ ನಡೆದಿದೆ. ನೀರು ಹಾದು ಹೋಗಲು ಚರಂಡಿ ನಿರ್ಮಾಣ ಮಾಡಿರುವುದು ಸರಿ. ಆದರೆ ಮಾಡಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸದೆ ಅರ್ದದಲ್ಲೇ ಕೆಲಸವನ್ನು ನಿಲ್ಲಿಸಿ ತಮ್ಮ ಪಾಡಿಗೆ ಇರುವ ಪುರಸಭೆಯು ಸಾರ್ವಜನಿಕರ ಮೂಲ ಸೌಕರ್ಯದಲ್ಲೊಂದಾದ ರಸ್ತೆಯನ್ನು ನಿರ್ಮಾಣ ಮಾಡಿದರೂ ಅದು ಪ್ರಯೋಜನಕ್ಕಿಲ್ಲದಂತಾಗಿದೆ. ಮಳೆಗಾಲದ ಈ ಸಮಯದಲ್ಲಿ ಸಮರ್ಪಕ ರಸ್ತೆಯ ಅಗತ್ಯ ತುಂಬಾ ಇದೆ. ಆದರೆ ಇಲ್ಲಿಯ ಜನರಿಗೆ ಮಳೆಗಾಲದಲ್ಲಿಯೇ ತೊಂದರೆಯುಂಟಾಗಿರುವುದು ವಿಪರ್ಯಾಸವೇ ಸರಿ.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...