ಬಂಟ್ವಾಳ : ಪೊದೆಗಳಲ್ಲಿ ತುಂಬಿ ತುಳುಕುತ್ತಿದ್ದು ಅವ್ಯವಸ್ಥಿತ ರೀತಿಯಲ್ಲಿ ದ್ದ ಕೈಕುಂಜೆಯ ಹಿಂದೂ ರುದ್ರ ಭೂಮಿ ಹೊಸ ಸಮಿತಿಯ ಮೂಲಕ ನವೀಕರಣ ಗೊಂಡು ಗಣೇಶ ಚತುರ್ಥಿ ಯ ದಿನದಂದು ಆಗಸ್ಟ್ 22 ರಿಂದ ಸೇವೆಗೆ ತೆರದುಕೊಳ್ಳಲಿದೆ ಎಂದು ನೂತನ ಸಮಿತಿಯ ಅಧ್ಯಕ್ಷ ಕೇಶವ ದೈಪಲ ತಿಳಿಸಿದ್ದಾರೆ.


ಹೊಸ ಸಮಿತಿ ರಚನೆಯ ಬಳಿಕ ಶ್ರಮದಾನದ ಮೂಲಕ ಹಿಂದೂ ರುದ್ರಭೂಮಿಯ ಕೆಲಸ ಕಾರ್ಯಗಳು ನಡೆದಿದ್ದು ಸುಸಜ್ಜಿತ ರೀತಿಯಲ್ಲಿ ಶವಸಂಸ್ಕಾರ ಕ್ಕೆ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.



ಹಿಂದೂ ರುದ್ರಭೂಮಿಯ ನೂತನ ಪಾಲನ ಸಮಿತಿಯ ಅಧ್ಯಕ್ಷರಾಗಿ ಕೇಶವ ದೈಪಲ ಅವರ ನ್ನು ಆಯ್ಕೆ ಮಾಡಲಾಗಿದೆ.
ಕಾರ್ಯದರ್ಶಿ ಯಾಗಿ ಮಚ್ಚೇಂದ್ರ ಸಾಲಿಯಾನ್ , ಉಪಾಧ್ಯಕ್ಷ ರುಗಳಾಗಿ ಬಿ.ರಾಮಚಂದ್ರ ರಾವ್, ಲಕ್ಷ್ಮಣ ಗೌಡ ಭಂಡಾರಿ ಬೆಟ್ಟು, ಉಮೇಶ್ ನಾಯಕ್ ಗಾಂದೋಡಿ, ಗಣೇಶ್ ದಾಸ ಪಲ್ಲಮಜಲು, ಭಾಸ್ಕರ ಕುಲಾಲ್ ಕಾಮಾಜೆ, ಚರಣ್ ಜುಮಾದಿಗುಡ್ಡೆ, ಕೋಶಾಧಿಕಾರಿ ಯಾಗಿ ಸುರೇಶ್ ಸಾಲಿಯಾನ್ ಚಿಕ್ಕಯ್ಯಮಠ, ಜೊತೆಕಾರ್ಯದರ್ಶಿಯಾಗಿ ಹರಿ ಪ್ರಸಾದ್ ಭಂಡಾರಿ ಬೆಟ್ಟು,ಪ್ರಧಾನಸಂಚಾಲಕರಾಗಿ ಪದ್ಮನಾಭ ಚಿಕ್ಕಯ್ಯಮಠ, ಸಹಸಂಚಾಲಕರಾಗಿ ನಾರಾಯಣ ಮೂಲ್ಯ ಭಂಡಾರಿ ಬೆಟ್ಟು, ಭಾಸ್ಕರ ಟೈಲರ್, ಮುರಳಿಕೃಷ್ಣ ಕೊಡಂಗೆ, ಲೋಕೇಶ್ ಕುಲಾಲ್ ಮಠ, ಶಶಿಧರ ಕೈಕುಂಜೆ,ಅಶ್ವತ್ ಅಲೆತ್ತೂರು, ಸದಾಶಿವ ಮದ್ವ, ಸತೀಶ್ ಶೆಟ್ಟಿ ಮೊಡಂಕಾಪು, ಪ್ರದೀಪ್ ಬಿಸಿರೋಡು, ಹರೀಶ್ ಚಿಕ್ಕಯ್ಯಮಠ, ಸುಧಾಕರ ಸಾಲಿಯಾನ್ ಸಂಚಯಗಿರಿ,ಶಿವಶಂಕರ ರಾವ್ ಅಲೆತ್ತೂರು, ಭೋಜಸಾಲಿಯಾನ್ ಕೈಕುಂಜೆ , ವಿಶ್ವನಾಥ ಬಿ.ಅವರನ್ನು ಆಯ್ಕೆ ಮಾಡಲಾಗಿದೆ.












