Tuesday, February 3, 2026

ಜವಾಬ್ದಾರಿ ಇದ್ದರೆ ಸಮಸ್ಯೆ ಬಗೆಹರಿಸಿ

ಯಾಕಿದು ಹೀಗೆ…? ಸ್ವಲ್ಪವಾದರೂ ಸ್ಥಳೀಯಾಡಳಿತಕ್ಕೆ ಜವಾಬ್ದಾರಿ ಬೇಡವೆ…? ಅಥವಾ ಜನಗಳ ಕುರಿತು ಔದಾಸೀನ್ಯವೆ…? ಸ್ಥಳೀಯ ಆಡಳಿತವಾಗಲಿ ಜನ ಪ್ರತಿನಿಧಿಗಳಾಗಲಿ ದಿವ್ಯ ಮೌನಿಗಳಾದ ಹಿನ್ನೆಲೆಯೇನು…? ಕಟ್ಟುವ ತೆರಿಗೆ ಹಣಕ್ಕಾದರೂ.,….ನಾಚಿಕೆಯಾಗಬೇಕು. ಇಷ್ಟೆಲ್ಲ ಯಾಕಂದ್ರೆ ಬಂಟವಾಳದ ಬಿ.ಸಿ.ರೋಡ್ ಕೈಕಂಬ ಸಮೀಪದ ಕಾರಂತ ಕೋಡಿಯಲ್ಲಿ ಶತಮಾನದಾದಿಯಿಂದ ಮಳೆನೀರು ಹೋಗುವ ತೋಡೊಂದರಲ್ಲಿ ಚರಂಡಿ ನೀರಿನ ಕೊಳಚೆಯನ್ನು ಧಾರಾಕಾರವಾಗಿ ಬಿಡಲಾಗುತ್ತಿದೆ. ಈ ಕುರಿತು ಕಳೆದ ಮೂರು ವರ್ಷಗಳಿಂದ ಸಂಬಂಧಿತ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಕೊಡಲಾಗಿದೆ. ಸ್ಥಳ ತನಿಖೆಯಾಗಿದೆ. ಭರವಸೆಯ ಮಹಾಪೂರವೇ ಹರಿದು ಬಂದಿದೆ. ಆದರೆ ಕೊಳಚೆ ನೀರು ನಿಂತಿಲ್ಲ ಮಾತ್ರವಲ್ಲ ಈ ಆಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮೀಪದ ಜಾಗವೊಂದರಲ್ಲಿ ಶೇಖರಗೊಳ್ಳುವಂತೆ ಮಾಡಿದೆ. ರಾಜಾರೋಷದಿಂದ ಎಲ್ಲಾ ರೀತಿಯ ಕೊಳಕನ್ನು ಹೊತ್ತು ತರುತ್ತಾ ಗಬ್ಬು ವಾಸನೆಯನ್ನು ಪ್ರಸರಿಸುತ್ತಾ ಇಲ್ಲಿನ ಹಲವಾರು ಬಾವಿಗಳ ನೀರನ್ನು ಕಲುಷಿತಗೊಳಿಸುತ್ತಿದೆ. ಸೊಳ್ಳೆಗಳ ಆವಾಸಸ್ಥಾನವಾಗಿ ಪರಿವರ್ತಿತವಾಗುತ್ತಿದೆ. ಈ ಕುರಿತು ಲೆಕ್ಕವಿಲ್ಲದಷ್ಟು ಸಲ ಸಂಬಧಿತರಿಗೆ ಮನವಿ ಸಲ್ಲಿಸಲಾಗಿದೆ.

ಮಾನವೀಯತೆ ಅಂತ ಇದ್ದರೆ, ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಬಂಟ್ವಾಳ ಪುರಸಭೆಯ ಅಧಿಕಾರಿ ವರ್ಗ, ಅದೇ ರೀತಿ ಚುನಾಯಿತ ಸದಸ್ಯರು ಮತ್ತು ಸಂಬಂಧಿತ ಇತರ ಯಾರೇ ಆಗಲಿ ತಕ್ಷಣವೇ ಎಚ್ಚರಗೊಂಡು ಈ ಜ್ವಲಂತ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ ಎಂದು ಆಗ್ರಹ ಮಾಡಿದ್ದಾರೆ.

 

More from the blog

ಐಸಿವೈಎಂ ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ

ಬಂಟ್ವಾಳ: ಇಂಡಿಯನ್ ಕ್ಯಾಥೊಲಿಕ್ ಯೂತ್ ಮೂವ್ ಮೆಂಟ್ (ಐಸಿವೈಎಂ) ಲೊರೆಟ್ಟೊ ಘಟಕದ 30ನೇ ಮಾಣಿಕ್ಯ ಮಹೋತ್ಸವ ನಡೆಯಿತು. ಪವಿತ್ರ ಬಲಿಪೂಜೆಯನ್ನು ರೆ.ಫಾ. ಅಶ್ವಿನ್ ಲೋಹಿತ್ ಕಾರ್ಡೋಜಾ, ರೆವರೆಂಡ್ ಫ್ರಾನ್ಸಿಸ್ ಕ್ರಾಸ್ತಾ ಮತ್ತು ಲೊರೆಟ್ಟೊ ಸೆಂಟ್ರಲ್...

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...

ಬಿ.ಸಿ.ರೋಡ್ : ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ:  ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಹಾಕಾಳಿಬೆಟ್ಟು ಮೈದಾನದಲ್ಲಿ ಭಾನುವಾರ ಸಂಜೆ ಹಿಂದು ಸಂಗಮ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶಂಖ, ಕಲಶ, ಭಾರತಮಾತೆಯ ಭಾವಚಿತ್ರದ ವಾಹನ, ವೀರ ಪುರುಷರ ವೇಷ, ಚೆಂಡೆ,...

ಬಂಟ್ವಾಳ : ಮನೆಗೆ ಆಕಸ್ಮಿಕ ಬೆಂಕಿ – ರಸ್ತೆಯಿಲ್ಲದೇ ಅಗ್ನಿಶಾಮಕ ಸಿಬ್ಬಂದಿಗಳ ಪರದಾಟ..

ಬಂಟ್ವಾಳ: ಗೂಡಿನ ಬಳಿಯ ಬಳಕ ಎಂಬಲ್ಲಿ ಮನೆಗೆ ಸೋಮವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸ್ಥಳಕ್ಕೆ ಬಂಟ್ವಾಳದ ಅಗ್ನಿಶಾಮಕದ ಸಿಬ್ಬಂದಿ ಆಗಮಿಸಲು ಪರದಾಟ ನಡೆಸಿದ ಘಟನೆ ನಡೆದಿದೆ. ಚಾರ್ಲಿ ಡಿಸೋಜಾ ಎಂಬವರಿಗೆ ಸೇರಿದ ಬಾಡಿಗೆ...