Thursday, February 13, 2025

ಗೋಳ್ತಮಜಲು ಗ್ರಾಮದ ಗ್ರಾಮ ದೈವಗಳಾದ ಶ್ರೀ ಗಿಳಿಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವದ ಗೊನೆ ಮುಹೂರ್ತ

ಬಂಟ್ವಾಳ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಗ್ರಾಮ ದೈವಗಳಾದ ಶ್ರೀ ಗಿಳಿಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಕಾಲಾವಧಿ ಜಾತ್ರಾ ಮಹೋತ್ಸವ ದಿನಾಂಕ 1-3-2024 ಶುಕ್ರವಾರಹಾಗೂ 2-3- 2024ನೇ ಶನಿವಾರ ನಡೆಯಲಿರುವುದು. ಅನಿಮಿತ್ತ ಇಂದು ಗೊನೆ ಮುಹೂರ್ತ ನಡೆಯಿತು.

ಜಾತ್ರೋತ್ಸವದ ಕಟ್ಟುಪಾಡಿನಂತೆ ದಿನಾಂಕ 23-2-2024 ರಿಂದ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಲಾಗುದು. ದಿನಾಂಕ 2-3-2024 ರಂದು ಬೆಳಿಗ್ಗೆ ಶ್ರೀ ದೈವಗಳ ಭಂಡಾರ ಬಂದು ಬಳಿಕ ಗಣಹೋಮ ಹಾಗೂ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂಪರ್ಪಣೆ ನೆರವೇರಲಿದೆ.

ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಿದ ಬಳಿಕ ಮೂಲಸ್ಥಾನದಲ್ಲಿ ತಂಬಿಲ ಸೇವೆ ಜರಗಲಿರುವುದು. ರಾತ್ರಿ ಏಳು ಗಂಟೆಗೆ ಸರಿಯಾಗಿ ಶ್ರೀ ಉಳ್ಳಾಕುಲು ದೈವಗಳ ಕೆರೆ ನೇಮೋತ್ಸವ ಮತ್ತು ಶ್ರೀ ಗಿಳಿಕಿಂದಾಯ ದೈವದ ನೇಮೋತ್ಸವ ಜರಗಳಿದೆ.

ದಿನಾಂಕ 2-3-2024 ನೇ ಶನಿವಾರ ಬೆಳಿಗ್ಗೆ 10 ಗಂಟೆಗೆ ದೈವಗಳಿಗೆ ಹೂವಿನ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು,ಸಂಜೆ ದೇವಸ್ಯ ಕಂಬಳ ಗದ್ದೆಯಲ್ಲಿ ಚೆಂಡು ಹಾಕಿದ ನಂತರ ರಾತ್ರಿ ಗಂಟೆ 7:00 ಕ್ಕೆ ಸರಿಯಾಗಿ ಶ್ರೀ ಉಳ್ಳಾಕುಲು ದೈವದ ವಲಸರಿ ಉತ್ಸವ ಮತ್ತುಶ್ರೀ ಗಿಳಿಕಿಂದಾಯ ದೈವದ ಹರಕೆ ನೇಮೋತ್ಸವ ಜರಗಲಿರುವುದು.

ದಿನಾಂಕ 4-3-2024 ರಂದು ಶ್ರೀ ಸತ್ಯದೇವತೆ ಮತ್ತು ಪರಿವಾರದ ದೈವಗಳಿಗೆ ನೇಮೋತ್ಸವ ಜರಗಳಿರುವುದು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...