Saturday, July 12, 2025

ಬಂಟ್ವಾಳ: ಸಂಭ್ರಮದ ಶಾರದೆಯ ಶೋಭಾಯಾತ್ರೆಗೆ ತಣ್ಣೀರೆರಚಿದ ಮಳೆ

ಬಂಟ್ವಾಳ: ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ,ಸಿಡಿಲಿನಬ್ಬರ, ಮಿಂಚಿನಿಂದ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ‌5 ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀಶಾರದಾ ಮಾತೆಯ ಶೋಭಾಯತ್ರೆಯ ಸಂಭ್ರಮಕ್ಕೆ‌ ತಣ್ಣೀರೆರಚಿತು.

ರಾತ್ರಿ ಸುಮಾರು 8 ಗಂಟೆಯ ವರೆಗೂ ಭಕ್ತಾದಿಗಳು ದೇವಳದ ಮುಂಭಾಗದಲ್ಲಿರಿಸಲಾದ ಶಾರದಾ ಮಾತೆಯ ದರ್ಶನ ಪಡೆದು ಸಂತೃಪ್ತರಾಗಿದ್ದರು. ಹುಲಿ,ಶಾರ್ದೂಲ, ಬಡ್ಡಕಟ್ಟೆ ಯುವಕ ಮಂಡಲದಿಂದ ವರ್ಷಂಪ್ರತಿಯಂತೆ ಅನಾರ್ಕಲಿ ಕುಣಿತ ಸಹಿತ ಸಣ್ಣಪುಟ್ಟ ವೇಷಗಳಿಂದ ಜನರಲ್ಲಿ ಉತ್ಸಾಹ ಮತ್ತು ಸಂಭ್ರಮದ ಕಳೆಗಟ್ಟಿತ್ತು. ಶಾರದಾ ಮಾತೆಯ ಮುಂಭಾಗದಲ್ಲಿ ಈ ವೇಷಧಾರಿಗಳಿಗೆ ತಮ್ಮ ಪ್ರದರ್ಶನಕ್ಕು ಅವಕಾಶ ಕಲ್ಪಿಸಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.ಈ ಸಂದರ್ಭ ಸಿಡಿಲಿನಬ್ಬರ,ಮಿಂಚು ಮತ್ತು‌ ಸುರಿಯಲಾರಂಭಿಸಿದ ಮಳೆಯಿಂದ ದೇವಳದ ವಠಾರದಲ್ಲಿ ಸೇರಿದ ಜನರು,ವೇಷಗಳು ಚದುರಿದರು. ಅಂಗಡಿ ಜಗಲಿಯಲ್ಲಿ ಮಳೆಗೆ ಆಶ್ರಯ‌ಪಡೆದರೆ,ಕೆಲವರು ತಮ್ಮ ಮನೆಯತ್ತ ಸಾಗಿದರು.ಸುಮಾರು ಮೂರ್ನಾಲ್ಕು ತಾಸುಗಳ ಕಾಲ ಮಳೆ,ಸಿಡಿಲಿನ ಅಬ್ಬರ ಕಡಿಮೆಯಾಗಲೇ ಇಲ್ಲ..ಕಳೆದ ಬಾರಿ ಕರೋನ ಮಹಾಮಾರಿ ಯಿಂದಾಗಿ ಬಂಟ್ವಾಳದಲ್ಲಿ ನಡೆಯಿವ ವೈಭವಯುತ ಶಾರದೋತ್ಸವ ಕಳೆಗುಂದಿದ್ದರೆ. ಈ ಬಾರಿ ಸರಳವಾಗಿಯಾದರೂ ಒಂದಷ್ಟು ಜನರಲ್ಲಿ ಸಂಭ್ರಮ ಮನೆಮಾಡಿತ್ತು .ಆದರೆ ಮಳೆರಾಯ ಮನಿಸಿಕೊಂಡಿದರಿಂದ ಇದೆಲ್ಲದಕ್ಕು ತಣ್ಣೀರೆರಚಿತು.ಮಳೆಯ ನಡುವೆಯೇ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಿತು.ದೇವಳದ ವಠಾರದಿಂದ ಶಾರದೆಯನ್ನು ಭಜಕರು ಹೆಗಲಲ್ಲೇ ಹೊತ್ತುಕೊಂಡು ರಥಬೀದಿಯಲ್ಲಿ ಸಾಗಿ ಬೈಪಾಸ್ ಶ್ರೀರಾಮಮಂದಿರದ ವರೆಗೆ ತೆರಳಿ‌ ಅಲ್ಲಿಂದ ವಾಪಾಸ್ ಬಂದು‌ ಬಡ್ಡಕಟ್ಟೆ ಹನುಮಾನ್ ದೇವಳದವರೆಗೆ ತೆರಳಿ ವಾಪಾಸ್ ಆದೇ ಮಾರ್ಗವಾಗಿ ಬಂದು ದೇವಳದ ಹಿಂಬಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.ಇದರೊಂದಿಗೆ ಐದುದಿನದ 54 ನೇ ವರ್ಷದ ಶಾರದೋತ್ಸವಕ್ಕೆ ತೆರೆ ಬಿತ್ತು.

More from the blog

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...