ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕಂದಾಯ ದಿನಾಚರಣೆ ಪ್ರಯುಕ್ತ ಹಸಿರೋತ್ಸವ ಕಾರ್ಯಕ್ರಮಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್. ಆರ್ ಅವರು ಹಲಸಿನ ಸಸಿ ನೆಡುವ ಮೂಲಕ ಹಸಿರೋತ್ಸವ ಆಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸ್ಥಾನಿಯ ಉಪತಹಶೀಲ್ದಾರ್ ಅಣ್ಣು ನಾಯ್ಕ್, ಉಪತಹಸೀಲ್ದಾರ್ ರಾಜೇಶ್ ನಾಯ್ಕ್,ಭೂಮಿ ಶಾಖೆ ಪ್ರಭಾರ ಶಿರಸ್ತೇದಾರ್ ಭಾನು ಪ್ರಕಾಶ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು,ಜೆ.ಜನಾರ್ದನ ಜಿಲ್ಲಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಪ್ರಕಾಶ್.ಪಿ ಅಧ್ಯಕ್ಷರು.ಕಂದಾಯ ನೌಕರರ ಸಂಘ ಬಂಟ್ವಾಳ, ಸೀತಾರಾಮ ಪೂಜಾರಿ ಉಪಾಧ್ಯಕ್ಷರು ಕಂದಾಯ ನೌಕರರ ಸಂಘ ಬಂಟ್ವಾಳ, ಮಂಜುನಾಥ್ ಕೆ.ಎಚ್.ಪ್ರಧಾನ ಕಾರ್ಯದರ್ಶಿ ಕಂದಾಯ ನೌಕರರ ಸಂಘ ಬಂಟ್ವಾಳ,ಅನಿಲ್ ಕೆ.ಪೂಜಾರಿ ಅಧ್ಯಕ್ಷರು ಬಂಟ್ವಾಳ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ, ಕರಿಬಸಪ್ಪ ಜಿ ನಾಯಕ್ ಉಪಾಧ್ಯಕ್ಷರು ಬಂಟ್ವಾಳ ಗ್ರಾಮ ಲೆಕ್ಕಾಧಿಕಾರಿಗಳ ಸಂಘ,ಮೋಹನ್ ದಾಸ್ ಕಲ್ಲಡ್ಕ ಅಧ್ಯಕ್ಷರು ಗ್ರಾಮ ಸಹಾಯಕರ ಸಂಘ ಬಂಟ್ವಾಳ ತಾಲೂಕು,
ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದರು.ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.
