Friday, July 4, 2025

ಪತಿಯ ಸಾವಿನ ಬೆನ್ನಲ್ಲೇ ಪತ್ನಿ ಬದುಕು ಕೊನೆ

ಬಂಟ್ವಾಳ : ಪತಿಯ ಸಾವಿನ ಬೆನ್ನಲ್ಲೇ ಪತ್ನಿಯೂ ಬದುಕನ್ನು ಕೊನೆಗಳಿಸಿದ ಘಟನೆ ಬಂಟ್ವಾಳದಲ್ಲಿ  ನಡೆದಿದೆ.

ಬಂಟ್ವಾಳ ಕಸ್ಬಾ ಗ್ರಾಮದ ಮುಗ್ಡಾಲ್ ಗುಡ್ಡೆ ಎಂಬಲ್ಲಿ ಪೂವಪ್ಪ ಮೂಲ್ಯ(70) ಎಂಬವರು ಸೋಮವಾರ ರಾತ್ರಿ ನಿಧನರಾಗಿದ್ದು ಮಂಗಳವಾರ ಸಂಜೆ ಅವರ ಧರ್ಮಪತ್ನಿ ಯಮುನಾ (63) ನಿಧನರಾಗಿದ್ದಾರೆ.

ಮದುವೆ ಸ್ವರ್ಗದಲ್ಲಿ ನಿಗದಿಯಾಗುತ್ತೆ ಅನ್ನುವ ಮಾತಿದೆ.

ಹಾಗೆಯೇ ಸಾವಿಗೂ ದಿನ ನಿಗದಿಯಾಗಿರುತ್ತೆ.

ಆದರೆ ಪತಿ ಸಾವಿನ ಬೆನ್ನಲ್ಲೇ ಪತ್ನಿ ಜೀವನವನ್ನು ಕೊನೆಗೊಳಿಸಿದ ಘಟನೆಗಳು ನಡೆಯುವುದು ಬಲು ಅಪರೂಪ.

ಪೂವಪ್ಪ ಮೂಲ್ಯರು ಬಂಟ್ವಾಳದಲ್ಲಿ ಎಲೆ ಅಡಿಕೆ ವ್ಯಾಪಾರದಲ್ಲಿ ಪ್ರಸಿದ್ಧಿಯಾಗಿದ್ದರು.

ಮೃತರು ಮೂರು ಗಂಡು ಒಂದು ಹೆಣ್ಣು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

More from the blog

ದ. ಕ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ಫೋರ್ಸ್ ರಚನೆ – ಸಿಎಂಗೆ ಬಿ. ರಮಾನಾಥ ರೈ ಅಭಿನಂದನೆ..

ಬೆಂಗಳೂರು :  ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಕೊಲೆಗಳು ಮತೀಯ ಸಂಘರ್ಷಣೆಗಳನ್ನು ಮಟ್ಟ ಹಾಕುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ದ.ಕ.ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್...

ಬೂಡ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ: ಕಾಂಗ್ರೆಸ್ ಮುಖಂಡ ಮಹಮ್ಮದ್ ನಂದಾವರ ಆಕ್ರೋಶ

ಬಂಟ್ವಾಳ: ಇಲ್ಲಿನ ನಗರ ಯೋಜನಾ ಪ್ರಾಧಿಕಾರದಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದು, ಪ್ರಾಧಿಕಾರದ ವಿರುದ್ದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಂದಾವರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದಲ್ಲಿ...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ  : ನ್ಯಾಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಗೆ ಮನವಿ

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ನ್ಯಾಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಬೇಟಿಯಾಗಿ ಮನವಿ ನೀಡಿದ್ದಾರೆ. ಬಳಿಕ...

ರಸ್ತೆ ಅಭಿವೃದ್ಧಿ ಕಾಮಗಾರಿ – ಜಾಗ ಕಳೆದುಕೊಂಡವರಿಗೆ ಬೆಳ್ತಂಗಡಿಯಲ್ಲಿ ದಾಖಲೆ ಸಂಗ್ರಹ ಶಾಖೆ ಆರಂಭ.. 

ಬೆಳ್ತಂಗಡಿ : ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಸ್ತೆಯ ಅಭಿವೃದ್ಧಿ ಕಾಮಗಾರಿ ವೇಳೆ ಬಹುತೇಕ ಸ್ಥಳೀಯರು ಜಾಗ ಕಳೆದುಕೊಂಡಿದ್ದರು. ಇದೀಗ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಅವರ ಮುತುವರ್ಜಿಯಲ್ಲಿ ರಾಷ್ಟ್ರೀಯ...