Saturday, July 12, 2025

ಗೋವಿಂದರಿಗೆ ಬೇಕಾಗಿದೆ ಸಹಾಯ ಹಸ್ತ

ಬಂಟ್ವಾಳ: ಮನೆಯ ಮಾಲಕನಿಗೆ ಹುಷಾರಿಲ್ಲ, ಮನೆಯ ಜವಬ್ದಾರಿಗೆ ಯಾರು ಇಲ್ಲ , ಎರಡು ಹೆಣ್ಣು ಮಕ್ಕಳಿಂದ ಮನೆಯ ಸಂಪೂರ್ಣ ಜೀವನ ಸಾಗಬೇಕಾಗಿದೆ.
ತಂದೆಯ ಔಷಧದ ಖರ್ಚಿಗೆ ಹಣ ಸಾಕಾಗುವುದಿಲ್ಲ, ಇದರ ಜೊತೆ ಬೀಳುವ ಸ್ಥಿತಿಯಲ್ಲಿರುವ ಸಣ್ಣ ಗುಡುಸಲು. ಇದು ನಗ್ರಿ ಗೋವಿಂದ ಕುಲಾಲ ಅವರ ಮನೆ.

ಕಡು ಬಡತನದಲ್ಲಿರುವ ಕುಟುಂಬದ ಸಂಪೂರ್ಣ ಜವಬ್ದಾರಿ ವಹಿಸಿ ಇದೀಗ ಮನೆ ನಿರ್ಮಾಣ ದ ನೆರವಿಗೆ ಯವಕರು ಮುಂದಾಗಿದ್ದಾರೆ.

ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ನಿವಾಸಿ ಮಿನಾಕ್ಷಿ ಗೋವಿಂದ ಕುಲಾಲ್ ಮತ್ತು ಎರಡು ಹೆಣ್ಣು ಮಕ್ಕಳಿರುವ ಬಡತನದಿಂದ ಬೆಳೆದು ಬಂದ ಕುಟುಂಬ. ಕುಟುಂಬಕ್ಕೆ ಆಸರೆಯಾಗಿದ್ದ ಗಂಡ ಗೋವಿಂದ ಕುಲಾಲ್ ಅವರು ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.. ಸ್ಥಳೀಯರ ಸಂಘಸಂಸ್ಥೆಗಳ ಮತ್ತು ನಾಗರಿಕರ ಸಹಾಯದಿಂದ ಔಷಧಿಗೆ ಮತ್ತು ಮನೆ ನಿರ್ವಹಣೆಗ ಸಹಾಯ ಮಾಡುತ್ತಿದ್ದಾರೆ. ಇವರ ಮನೆ ಹಳೆಯದಾಗಿದ್ದು ಬೀಳುವ ಪರಿಸ್ಥಿತಿಯಲ್ಲಿ ಇದೆ.

ಕಳೆದ ಎರಡು ವರ್ಷದ ಹಿಂದೆ ಸಂಘ ಸಂಸ್ಥೆಯ ಯುವಕರಿಂದ ರಿಪೇರಿ ಮಾಡಿಕೋಟ್ಟಿದ್ದರು ಮತ್ತೆ ಅದೇ ಯುವಕರು ಹೋಸ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎ.3 ರಂದು ಬುದವಾರ ಅಡಿಗಲ್ಲು ಇಟ್ಟಿದ್ದಾರೆ ಸಹೃದಯಿಗಳು ಅವರ ಕಾರ್ಯಕ್ಕೆ ಮತ್ತು ನಮ್ಮ ಮನೆ ನಿರ್ಮಾಣಕ್ಕೆ ಸಹಾಯಹಸ್ತ ನೀಡಬೇಕಾಗಿ ವಿನಂತಿ ನನ್ನ ಖಾತೆ ..ಕರ್ಣಾಟಕ ಬ್ಯಾಂಕ್ ಮಂಚಿ.. ಖಾತೆ ಸಂಖ್ಯೆ: 4652500101879401
Ifsc code : KARB0000465
ತಮ್ಮ ಕೈಲಾದಷ್ಟು ಸಹಾಯ ಮಾಡಬೇಕಾಗಿ ವಿನಂತಿ.  ಲೋಹಿತ್ ಪನೊಲಿಬೈಲ್ 9731530124 ಯಶವಂತ್ ನಗ್ರಿ 9916054307 ರವಿ ನಗ್ರಿ 9741502667.

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...