ಬಂಟ್ವಾಳ: ಭಾಸ್ಕರ್ ಎಂ. ಇವರನ್ನು ಉಳ್ಳಾಲ ಗೃಹರಕ್ಷಕ ದಳದ ಘಟಕಾಧಿಕಾರಿಯಾಗಿ ನೇಮಕ ಮಾಡಿ ಅಧಿಕಾರವನ್ನು ಹಸ್ತಾಂತರಿಸಲಾಗಿದೆ. ಗೃಹರಕ್ಷಕ ದಳದಲ್ಲಿ ಶ್ರೀ ಭಾಸ್ಕರ್ ಎಂ. ಮೆಟಲ್ ಸಂಖ್ಯೆ 01 ಅವರು ಗೃಹರಕ್ಷಕ ದಳದಲ್ಲಿ ಸುಮಾರು ೩೫ ವರ್ಷಗಳಿಂದ ಗೃಹರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾ.19ರಂದು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರುರವರು ಭಾಸ್ಕರ್ ಎಂ. ಅವರಿಗೆ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿಯ ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು. ಉಳ್ಳಾಲ ಘಟಕದಲ್ಲಿ 44 ಸಂಖ್ಯಾಬಲವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗೃಹರಕ್ಷಕರನ್ನು ನೇಮಿಸಿ ಉಳ್ಳಾಲ ಗೃಹರಕ್ಷಕ ಘಟಕವನ್ನು ಬಲಪಡಿಸಬೇಕೆಂದು ಸಮಾದೇಷ್ಟರು ಸೂಚಿಸಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಸಮಾದೇಷ್ಟರಾದ ಶ್ರೀ ರಮೇಶ್ ಅವರು ಉಪಸ್ಥಿತರಿದ್ದರು ಹಾಗೂ ಕಛೇರಿ ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿಯಾದ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕರಾದ ಸುನಿಲ್ ಪೂಜಾರಿ, ಸುನಿಲ್ ಕುಮಾರ್, ದಿವಾಕರ್, ದುಷ್ಯಂತ್ ರೈ, ಜಯಲಕ್ಷ್ಮಿ, ಸುಲೋಚನಾ ಈ ಸಂದರ್ಭದಲ್ಲಿ ಹಾಜರಿದ್ದರು.

