ಬಂಟ್ವಾಳ : ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಹಾಗೂ ಊರಿನ ದಾನಿಗಳ ಸಹಕಾರದೊಂದಿಗೆ ತೀವ್ರ ಸಂಕಷ್ಟದಲ್ಲಿರುವ ಪ್ರಸ್ತುತ ವಗ್ಗದ ಅಂಚಿಕಟ್ಟೆ ಯಲ್ಲಿ ವಾಸವಾಗಿರುವ ಹೃದಯದ ಸಮಸ್ಯೆಯಿಂದ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಹಳ ಕಷ್ಟಕರ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಹರೀಶ್ ಪೂಜಾರಿ ವಗ್ಗ ಇವರಿಗೆ ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಹಾಗೂ ಊರಿನ ದಾನಿಗಳ ಸಹಕಾರದೊಂದಿಗೆ 8200 ಧನಸಹಾಯ ಹಾಗೂ 50ಕೆಜಿ ಅಕ್ಕಿ ತರಕಾರಿ ಹಾಗೂ ದಿನಬಳಕೆಯ ಸಾಮಗ್ರಿಗಳನ್ನು ಹಸ್ತಾಂತರ ಮಾಡಲಾಯಿತು.



ಈ ಸಂದರ್ಭದಲ್ಲಿ ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಯ ಕಾರ್ಯಕರ್ತರು ಹಾಗೂ ಬಂಟ್ವಾಳ ಪ್ರಖಂಡದ ಸಹಸಂಚಾಲಕರಾದ ಸಂತೋಷ್ ಜಿ ಸರಪಾಡಿ ಹಾಗೂ ದೀಪಕ್ ಜಿ ಬಿ ಎಂ ಎಸ್ ಅಧ್ಯಕ್ಷ ರಾದ ಸತೀಶ್ ಕುಲಾಲ್ ಬಿಸಿರೋಡ್ ಉಪಸ್ಥಿತರಿದ್ದರು.












