ಬಂಟ್ವಾಳ: ಮಾ.13 ಶ್ರೀ ದುರ್ಗಾಪರಮೇಶ್ವರೀ ಭಕ್ತ ವೃಂದ, ಸಜೀಪಮಾಗಣೆ ಶ್ರೀ ದುರ್ಗಾಪರಮೇಶ್ವರೀ ಬಂಟ್ವಾಳ ತಾಲೂಕು ಪಂಚಮ ವರ್ಷದ ಯಕ್ಷಗಾನ ಬಯಲಾಟ ಸೇವೆ ಸಜೀಪ ಮೂಡದ ಪೆಲತ್ತಕಟ್ಟೆ ಮೈದಾನದಲ್ಲಿ ದಿನಾಂಕ 14/03/2021ರ ಭಾನುವಾರ ರಾತ್ರಿ ಘಂಟೆ 8.30ರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಆಡಿತೋರಿಸಲಿರುವರು.


ಸಜೀಪಮುನ್ನೂರು ಯುವಕ ಸಂಘ(ರಿ) ಕಂದುರಿನಿಂದ ಪೆಲತ್ತಕಟ್ಟೆಗೆ ಭಜನೆ, ಚೆಂಡೆ, ಬ್ಯಾಂಡ್ ವಾದನದೊಂದಿಗೆ ಮೇಳದ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ, ಸಂಜೆ6.30ರಿಂದ ಧಾರ್ಮಿಕ ಪ್ರಭೋಧನಾ ಸಭೆ ನಡೆಯಲಿದ್ದು ದೀಪೋಜ್ವಲನ ಮತ್ತು ಪರಮಪೊಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಆಶೀರ್ವಚನ ನಡೆಯಲಿದೆ, ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣರು, ಸದಾನಂದ ವಂಕಟೇಶ ಅಸ್ರಣ್ಣರು ಭಾಗವಹಿಸಲಿದ್ದಾರೆ.
ಚೌಕಿ ಪೊಜೆ, ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.












