Friday, June 27, 2025

ಕೈಕಂಬ ಸೂರ್ಯವಂಶ ವಾಣಿಜ್ಯ ಸಂಕೀರ್ಣ 4ನೇ ಮಹಡಿಯಲ್ಲೂ ಟೇರೆಸ್ ಕೃಷಿಯಲ್ಲಿ ಯಶಸ್ವಿಯಾದ ಸಂಕೀರ್ಣದ ಮಾಲೀಕ

ಬಂಟ್ವಾಳ, ಮಾ.3: ಕೃಷಿ ಮಾಡಬೇಕಾದರೆ ಸ್ಥಾಕಷ್ಟು ಸ್ಥಳ ಬೇಕು, ನಗರ ಪ್ರದೇಶದಲ್ಲಿ ಇದು ಅಸಾಧ್ಯವೆಂಬುದು ಸಾಕಷ್ಟು ಮಂದಿಯ ಅಭಿಪ್ರಾಯ. ಆದರೆ ಬಿ.ಸಿ.ರೋಡಿನ ಕೈಕಂಬದಲ್ಲಿ ವಾಣಿಜ್ಯ ಸಂಕೀರ್ಣವೊಂದರ ಮಾಲಕ ತಮ್ಮ ಸಂಕೀರ್ಣದ ೪ನೇ ಮಹಡಿಯ ಮೇಲಿನ ಖಾಲಿ ಸ್ಥಳದಲ್ಲಿ ಹತ್ತಾರು ಬಗೆಯ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ.
ಕೈಕಂಬ ಜಂಕ್ಷನ್‌ನಲ್ಲಿರುವ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ಮಾಲಕ ಡಾ| ಗೋವರ್ಧನ್ ರಾವ್ ಅವರೇ ಟೇರೆಸ್ ಕೃಷಿ ಮಾಡಿರುವ ಕೃಷಿಕ. ಇವರ ಟೇರೆಸ್ ಮೇಲಿರುವಷ್ಟು ಗಿಡಗಳು ಎಕರೆಗಟ್ಟಲೆೆ ಸ್ಥಳವಿರುವ ಕೃಷಿಕರ ಬಳಿಯೂ ಇರಲಿಲ್ಲ. ೪ನೇ ಮಹಡಿಗೆ ಮಣ್ಣು, ಗೊಬ್ಬರವನ್ನು ಹೊತ್ತುಕೊಂಡು ಹೋಗಿಯೇ ಕೃಷಿ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ.

ಡಾ| ಗೋವರ್ಧನ್ ರಾವ್ ಅವರು ಸೌದಿ ಅರೇಬಿಯಾದ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿದ್ದು, 2019ರಲ್ಲಿ ನಿವೃತ್ತಿ ಹೊಂದಿ ಮನೆಗೆ ಆಗಮಿಸಿದ್ದರು. ಕೈಕಂಬದ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲೇ ಅವರ ಮನೆಯಿದ್ದು, ಪ್ರಾರಂಭದಲ್ಲಿ ಮನೆಯ ಮಹಡಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದರು. ಬಳಿಕ ಸಮಯ ಕಳೆಯುವುದಕ್ಕಾಗಿ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ಕೃಷಿಯನ್ನು ಆರಂಭಿಸಿದರು. 4 ಸಾವಿರ ಚ.ಅಡಿ ವಿಸ್ತೀರ್ಣ ವಾಣಿಜ್ಯ ಸಂಕೀರ್ಣದ 4ನೇ ಮಹಡಿಯಲ್ಲಿ ಸುಮಾರು 4 ಸಾವಿರ ಚದರ ಅಡಿ ವಿಸೀರ್ಣದಲ್ಲಿ ಇವರ ಕೃಷಿ ವಿಸ್ತರಿಸಿಕೊಂಡಿದೆ. ಟೊಮೆಟೊ, ಹಿರೇಕಾಯಿ, ಸೋರೆಕಾಯಿ, ಅಲಸಂಡೆ, ಅರಿವೆ, ಬಸಳೆ, ಮೆಣಸು, ಗೆಣಸು, ಬದನೆ, ಈರುಳ್ಳಿ ಮೊದಲಾದ ತರಕಾರಿ ಗಿಡಗಳಿವೆ. ಚೆಂಡು ಹೂವು, ಗುಲಾಬಿ ಸೇರಿದಂತೆ ಹತ್ತಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಚಿಕ್ಕು, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬುನೇರಳೆ, ಪೇರಳೆ, ಬುಗರಿ ಹಣ್ಣು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳು ಕೂಡ ಇವರ ಬಳಿ ಇದ್ದು, ಈಗಾಗಲೇ ಫಸಲು ಬಿಡುತ್ತಿವೆ. ಮಣ್ಣು, ಕೊಳೆತ ತರಕಾರಿ, ಬೆಲ್ಲ, ಸೆಗಣಿ ಮೊದಲಾದ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಳಿದಂತೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕುವ ಕಾರ್ಯ ನಿರ್ವಹಿಸುತ್ತಾರೆ. ಪ್ರಾರಂಭದಲ್ಲಿ ಮಣ್ಣು, ಗೊಬ್ಬರವನ್ನು ತಾವೇ ಹೊತ್ತುಕೊಂಡು ೮೬ ಮೆಟ್ಟಿಲು ಹತ್ತಿ ಕೊಂಡು ಹೋಗುತ್ತಿದ್ದು, ಪ್ರಸ್ತುತ ಅದಕ್ಕೆ ರಾಟೆಯ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಗೆ ಬಿಸಿಲು ಬೀಳದಂತೆ ರಕ್ಷಿಸಲು ಹಸಿರು ನೆಟ್‌ನ ವ್ಯವಸ್ಥೆ ಕೂಡ ಮಾಡಿದ್ದಾರೆ.

ಮಾರಾಟ ಮಾಡುವುದಿಲ್ಲ.!

ಈಗಾಗಲೇ ಸಾಕಷ್ಟು ತರಕಾರಿ ಬೆಳೆದಿರುವ ಇವರು ಯಾವುದೇ ತರಕಾರಿಯನ್ನು ಮಾರಾಟ ಮಾಡಿಲ್ಲ. ಬದಲಾಗಿ ನಂದಾವರ ದೇವಸ್ಥಾನಕ್ಕೆ ಉಚಿತವಾಗಿ ತರಕಾರಿ ನೀಡುತ್ತಿದ್ದಾರೆ. ಉಳಿದಂತೆ ಮನೆಗೆ ಬಂದವರು ತರಕಾರಿ ಪಡೆದುಕೊಂಡು ಹೋಗುತ್ತಾರೆ. ತಾವು ಹವ್ಯಾಸವಾಗಿ ಇದನ್ನು ಮಾಡುತ್ತಿದ್ದು, ಮಾರಾಟದ ಉದ್ದೇಶದಿಂದ ಬೆಳೆಸುತ್ತಿಲ್ಲ ಎನ್ನುತ್ತಾರೆ.

ಗಿಡಗಳು ನೆಮ್ಮದಿ ನೀಡುತ್ತವೆ
ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಬೇಕು. ಸ್ಥಳವಿಲ್ಲದೇ ಇದ್ದರೆ ಈ ರೀತಿ ಟೇರೆಸ್ ಮೇಲೆ ಬೆಳೆಯಬಹುದು. ತಾನು ಸಮಯ ಕಳೆಯುವ ಉದ್ದೇಶದಿಂದ ಈ ರೀತಿ ಗಿಡಗಳನ್ನು ಬೆಳೆಸುತ್ತಿದ್ದು, ಇದು ನೆಮ್ಮದಿ ನೀಡುತ್ತಿದೆ. ನಾವು ಬೆಳೆಸಿದ ಗಿಡಗಳು ಎಂದಿಗೂ ನಮಗೆ ಮೋಸ ಮಾಡುವುದಿಲ್ಲ. ಮುಂದೆ ಎಲ್ಲಾದರೂ ಸ್ಥಳ ಸಿಕ್ಕಿದರೆ ಮೆಡಿಸಿನ್ ಗಿಡಗಳನ್ನು ಬೆಳೆಸಬೇಕು ಎಂಬ ಆಲೋಚನೆ ಇದೆ.

– ಡಾ| ಗೋವರ್ಧನ್ ರಾವ್
ಟೆರೆಸ್ ಕೃಷಿಕ, ಕೈಕಂಬ.

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...