ಬಂಟ್ವಾಳ:ಫೆ.26ರಂದು ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಆಗತ-ಸ್ವಾಗತ ಕರ್ಯಕ್ರಮ ನಡೆಯಿತು.
ನೂತನವಾಗಿ ದಾಖಲಾದ ವಿದ್ಯಾರ್ಥಿಗಳು ಯಜ್ಞ ಕುಂಡಕ್ಕೆ ಹವಿಸ್ಸು ಅರ್ಪಿಸಿ, ಹಿರಿಯರಿಂದ ತಿಲಕಧಾರಣೆ ಮಾಡಿಸಿಕೊಂಡು ಭಾರತಮಾತೆಗೆ ಪುಷ್ಮಾರ್ಚನೆಗೈದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರಭಾಕರ್ ಭಟ್, ಕಲ್ಲಡ್ಕ ಆಗತ ಸ್ವಾಗತವೆಂಬುದು ಹೊಸ ರೀತಿಯ ಹೊಸ ಕಲ್ಪನೆಯ ಕಾರ್ಯಕ್ರಮ. ಇದರಿಂದ ನಮ್ಮ ಶಿಕ್ಷಣದ ಮೂಲ ಚಿಂತನೆ, ವಿನೀತತೆ, ಗುರುಹಿರಿಯರಲ್ಲಿ ಗೌರವ ಹಾಗೂ ಪ್ರತಿಷ್ಟೆಯ ಬದುಕು ವಿದ್ಯಾರ್ಥಿಗಳದ್ದಾಗಬೇಕೆಂದು ತಿಳಿಸಿದರು. ಅತಿಥಿಯಾದ ಐಟಿ ಇಂಜಿಯನರ್ ಶ್ರೀ ಸ್ವರೂಪ್ ಪದ್ಮನಾಭ ವಿದ್ಯಾರ್ಥಿಗಳು ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಅದರ ಜೊತೆಗೆ ತಮ್ಮ ಕನಸುಗಳನ್ನು ನನಸಾಗಿಸಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀಯುತ ಪದ್ಮನಾಭ ತೆಂಗಿನಮನೆ, ಶ್ರೀಮತಿ ಭವ್ಯ ಸ್ವರೂಪ್, ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ನಾಗೇಶ್ ಕಲ್ಲಡ್ಕ, ಶ್ರೀಮತಿ ಲಕ್ಷಿರಘುರಾಜ್, ಶ್ರೀಮತಿ ಮಲ್ಲಿಕಾ ಶೆಟ್ಟಿ, ಶ್ರೀರಾಮ ಶಿಶುಮಂದಿರದ ವ್ಯವಸ್ಥಾಪಕರಾದ ಶ್ರೀಮತಿ ಸುಧಾ ಕಶೆಕೋಡಿ, ಪ್ರಾಚಾರ್ಯರಾದ ಶ್ರೀಯುತ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭವನೀಶ್ ಅಭ್ಯಾಗತರನ್ನು ಸ್ವಾಗತಿಸಿ, ವೈಷ್ಣವಿ ಕರ್ಯಕ್ರಮವನ್ನು ನಿರೂಪಿಸಿ, ಚೈತ್ರಾ ವಂದಿಸಿದರು.












