Monday, February 10, 2025

ದಿನದಿಂದ ದಿನಕ್ಕೆ ನೇತ್ರಾವತಿ ನದಿ ನೀರಿನ ಮಟ್ಟ ಕುಸಿತ: ಮಂಗಳೂರಿಗೆ ಶುರುವಾಯಿತು ನೀರಿನ ಚಿಂತೆ

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ನಿಂತಿದ್ದು ಜನರಿಗೆ ಕುಡಿಯವ ನೀರಿನ ಸಮಸ್ಯೆಯ ಭಯ ಹೆಚ್ಚಾಗಿದೆ.
ಸುಬ್ರಹ್ಮಣ್ಯ ದಿಂದ ಬಿಸಿರೋಡ್ ವರೆಗೆ ಅಧಿಕಾರಿಗಳ ತಂಡ ನದಿ ಒಳಹರಿವಿನ ಬಗ್ಗೆ ವೀಕ್ಷಣೆ ನಡೆಸಿದ್ದು ಅತಂಕ ವ್ಯಕ್ತವಾಗಿದೆ.
ಬಿಸಿಲಿನ ಝಳವು ಹೆಚ್ಚುತ್ತಿದ್ದು ನೇತ್ರಾವತಿ ನದಿ ತುಂಬೆ ಮತ್ತು ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಂಚುಗಳ ಲೆಕ್ಕಾಚಾರದಲ್ಲಿ ಕುಸಿಯುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗದು.
ವಾರದ ಹಿಂದೆ 5.6 ಮೀಟರ್‌ನಲ್ಲಿದ್ದ ತುಂಬೆ ಡ್ಯಾಂ ನೀರಿನ ಮಟ್ಟ ಮಾ. 18 ರಂದು 5 ಮೀಟರ್‌ಗೆ ಕುಸಿದಿದೆ. ಶಂಭೂರು ಡ್ಯಾಂನಲ್ಲಿ ಸಮುದ್ರ ಮಟ್ಟದಿಂದ 48.40 (5.8 ಮೀಟರ್) ನೀರು ದಾಸ್ತಾನು ಹೊಂದಿದೆ.


ಒಂದು ಅಂದಾಜು ಪ್ರಕಾರ ತುಂಬೆ ಡ್ಯಾಂ ಕುಡಿಯುವ ನೀರಿನ ಸಂಗ್ರಹ ಮುಂದಿನ 40 ದಿನಗಳಿಗೆ ಸಾಕು. ಶಂಭೂರು ಎಎಂಆರ್ ಡ್ಯಾಂ ನೀರಿನಿಂದ ಮುಂದಿನ 15 ದಿನಗಳಷ್ಟು ಕಾಲ ಸುಧಾರಿಸಹುದು ಎನ್ನುವುದು ಅಧಿಕಾರಿ ವರ್ಗದ ಅಭಿಪ್ರಾಯವಾಗಿದೆ.
ಎಎಂಆರ್ ಡ್ಯಾಂನಲ್ಲಿ ತಳದ ಒಂದೂವರೆ ಮೀಟರ್ ನೀರು ಕೂಡಾ ಬಳಕೆಗೆ ದೊರೆಯುವುದಿಲ್ಲ. ಈಗಾಗಲೇ ಸುಮಾರು ಒಂದು ಮೀಟರ್‌ನಷ್ಟು ಹೂಳು ತುಂಬಿದ್ದಾಗಿ ಮಾಹಿತಿ ಮೂಲಗಳು ಹೇಳಿದ್ದು ಅಲ್ಲಿಯೂ 4.3 ಮೀಟರ್ ನೀರು ಬಳಕೆಗೆ ಸಿಗುವುದು. ಆದರೆ ಅದನ್ನು ತುಂಬೆ ಡ್ಯಾಂಗೆ ಹರಿಸಿ ಅಲ್ಲಿಂದ ಎತ್ತಬೇಕು. ನೀರು ತುಂಬೆಗೆ ಹರಿದು ಅಲ್ಲಿ ದಾಸ್ತಾನಾಗಲು ಕನಿಷ್ಟ 24 ಗಂಟೆಗೆ ಅವಧಿ ಬೇಕು.
ಉರಿ ಬಿಸಿಲಿಗೆ ದಿನಕ್ಕೆ ಕನಿಷ್ಟ 1 ರಿಂದ 2ಇಂಚು ನೀರು ಅವಿಯಾಗುವುದಾಗಿ ಹೇಳಲಾಗುತ್ತದೆ.
ಇದರ ನಡುವೆ ಮಳೆಯ ಲಕ್ಷಣ ಇರುವುದರಿಂದ ಒಂದೆರಡು ಮಳೆಯಾದರೂ ನದಿ ನೀರಿನ ಸಂಗ್ರಹದಲ್ಲಿ ಕೊರತೆ ಬಾರದು ಎನ್ನುವ ಲೆಕ್ಕಾಚಾರವಿದೆ.
ಕಳೆದ ಎರಡು ವರ್ಷಗಳ ಹಿಂದೆ ಹೊಸ ವೆಂಟೆಡ್ ಡ್ಯಾಂ ಮೂಲಕ ಆರು ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗುತ್ತಿದ್ದು , ನೀರಿನ ಸಮಸ್ಯೆ ಎದುರಾಗದು ಎಂಬ ನಿರೀಕ್ಷೆ ಅಧಿಕಾರಿಗಳಾಗಿತ್ತು, ಇನ್ನೊಂದು ಕಡೆ ಯಿಂದ ಕಳೆದ ಬಾರಿ ಸಾಕಷ್ಟು ಮಳೆ ಕೂಡ ಬಂದಿತ್ತು . ಇತ್ತೀಚಿನ ಕೆಲ ದಿನಗಳಿಂದ ವಿಪರೀತ ತಾಪದಿಂದ ನೀರು ಆವಿಯಾಗುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ.

ಹೀಗಾಗಿ ಮಂಗಳೂರು ಮಹಾಜನತೆಗೆ ನೀರು ಕಡಿಮೆಯಾಗುವ ಸಾಧ್ಯತೆ ಗಳು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಭವಣೆ ಉಂಟಾಗಿ ಮಂಗಳೂರಿಗೆ ಮೂರು ದಿಗಗಳಿಗೊಮ್ಮೆ ನೀರು ಕೊಡುವ ಮೂಲಕ ಬಹಳ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಇಲಾಖೆ ಈ ಬಾರಿ ಮೊದಲೆ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಯಾಗದಂತೆ ಎಚ್ಚರಿಕೆ ವಹಿಸುತ್ತಿದೆ.

More from the blog

ಬೆಳ್ತಂಗಡಿ : ಗ್ರಾಮ ಆಡಳಿತಾಧಿಕಾರಿಗಳಿಂದ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಮೇರೆಗೆ ಫೆ. 10 ರಿಂದ ಬೆಳ್ತಂಗಡಿಯಲ್ಲಿ...

ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಯಿತು ಪೂರ್ವಭಾವಿ ಸಭೆ

ಬಂಟ್ವಾಳ:  ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಇಲ್ಲಿ ನಡೆಯುವ ಶತಚಂಡಿಕಯಾಗದ ಹಾಗೂ ಕುಪ್ಪೆಟ್ಟು ಬರ್ಕೆ ಕರ್ಪೆ ಪ್ರತಿಷ್ಠಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...